ಕೊಲ್ಲೂರು : ಶ್ರೀಲಂಕಾ ಪ್ರಧಾನಿ ರನೇಲ ವಿಕ್ರಂ ಸಿಂಘೆ 11:10ರ ಸುಮಾರಿಗೆ ಆಗಮಿಸಿ ಕೊಲ್ಲೂರು ಶ್ರೀಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಹಾಗೂ ನವ ಚಂಡಿಕಾ ಯಾಗದಲ್ಲಿ ಪೂರ್ಣಾಹುತಿ ಸಲ್ಲಿಸಿದರು.
ಹವಾಮಾನ ವೈಫರಿತ್ಯದ ಕಾರಣದಿಂದ ಹೆಲಿಕಾಫ್ಟರ್ ಬದಲು ಬಿಗು ಭದ್ರತಾ ವ್ಯವಸ್ಥೆ ನಡುವೆ ಕಾರಿನಲ್ಲಿ ಕೊಲ್ಲೂರಿಗೆ ಆಗಮಿಸಿದ ಪ್ರಧಾನಿ ವಿಕ್ರಂ ಸಿಂಘೆ, ಆರ್ಎನ್ ಶೆಟ್ಟಿ ಗೆಸ್ಟ್ ಹೌಸ್ಗೆ ಆಗಮಿಸಿದಾಗ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹಾಗೂ ಎಸ್ಪಿ ನಿಶಾ ಜೇಮ್ಸ್ ಅವರು ಜಿಲ್ಲಾಡಳಿತದ ಪರವಾಗಿ ಸ್ವಾಗತಿಸಿದರು.
ಅಲ್ಲಿಂದ ದೇವಸ್ಥಾನಕ್ಕೆ ಆಗಮಿಸಿ ಅಲ್ಲಿ ಅವರ ಪರವಾಗಿ ನಡೆಯುತ್ತಿದ್ದ ನವ ಚಂಡಿಕಾ ಯಾಗದಲ್ಲಿ ಪೂರ್ಣಾಹುತಿ ನೀಡಿದರು.
Click this button or press Ctrl+G to toggle between Kannada and English