ಇಬ್ಬರು ಯುವಕರು ಕೆರೆಯಲ್ಲಿ ಮುಳುಗಿ ಸಾವು

6:07 PM, Wednesday, July 31st, 2019
Share
1 Star2 Stars3 Stars4 Stars5 Stars
(No Ratings Yet)
Loading...

manya ಕಾಸರಗೋಡು:  ಈಜಲೆಂದು ಕೆರೆಗೆ ಇಳಿದಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬದಿಯಡ್ಕ ಗ್ರಾಮ ಪಂಚಾಯಿತಿಗೊಳಪಟ್ಟ ಮಾನ್ಯ ಎಂಬಲ್ಲಿ ಬುಧವಾರ ನಡೆದಿದೆ.

ಮೃತರನ್ನು ಆಲಂಪಾಡಿ ಬಾಪಚ್ಚಿ ನಗರದ ಶಾಫಿ ಅವರ ಪುತ್ರ ಖಾದರ್ (18) ಮತ್ತು ಬೆಳ್ಳೂರಡ್ಕ ಮಹಮ್ಮದ್ ಅವರ ಪುತ್ರ ಸಾಲಿ (17) ಎಂದು ಗುರುತಿಸಲಾಗಿದೆ. ಕರ್ಕಡ ಅಮವ್ಯಾಸೆ ಪ್ರಯುಕ್ತ ಇಂದು ಕೇರಳದಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಇದ್ದ ಕಾರಣ ಒಟ್ಟು 30 ಜನ ಯುವಕರ ತಂಡವು ಮಾನ್ಯ ಸಮೀಪ ಕೆರೆಯಲ್ಲಿ ಈಜಲು ಹೋಗಿದ್ದರು.

ಈ ಸಂದರ್ಭದಲ್ಲಿ ಖಾದರ್ ಹಾಗೂ ಸಾಲಿ ಆಯತಪ್ಪಿ ನೀರಿನಲ್ಲಿ ಮುಳುಗಿ ಮೃತಪಟ್ಟರು ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದುಬಂದಿದೆ. ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English