ಆರು ಮಂದಿ ಕುಟುಂಬದ ಸದಸ್ಯರನ್ನು ಕೊಂದು, ತಾನು ಆತ್ಮಹತ್ಯೆಗೆ ಶರಣಾದ ಯುವಕ

2:43 PM, Saturday, August 3rd, 2019
Share
1 Star2 Stars3 Stars4 Stars5 Stars
(No Ratings Yet)
Loading...

Nathuvala-villageಪಂಜಾಬ್  :  ಕುಟುಂಬದ ಸದಸ್ಯರೊಂದಿಗೆ ಜಗಳವಾಡಿ ಅಕ್ಕ, ಸೊಸೆ, ಅಜ್ಜ-ಅಜ್ಜಿ, ಕೊನೆಗೂ ತಂದೆ-ತಾಯಿಯನ್ನು ಬಿಡದ ಯುವಕ ಎಲ್ಲರನ್ನು ಗನ್ನಿಂದ ಶೂಟ್ ಮಾಡಿ, ಬಳಿಕ ತಾನು ಸಹ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿನ ನಥುವಾಲ್ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಸಂದೀಪ್ಸಿಂಗ್ ತನ್ನ ಕುಟುಂಬದ ಜೊತೆ ಯಾವುದೋ ವಿಷಯಕ್ಕೆ ಕಿತ್ತಾಡಿಕೊಂಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದ್ದು, ಪಿಸ್ತೂಲ್ನಿಂದ ತನ್ನ ಹೆತ್ತ ತಂದೆ ತಾಯಿ, ಅಜ್ಜಿ, ಒಡಹುಟ್ಟಿದ ಅಕ್ಕ ಮತ್ತು ಅಕ್ಕನ 3 ವರ್ಷದ ಮಗಳಿಗೂ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಬಳಿಕ ತಾನೂ ಶೂಟ್ ಮಾಡಿಕೊಂಡು ಸಾವಿಗೆ ಶರಣಾಗಿದ್ದಾನೆ. ಈ ಘಟನೆಯಲ್ಲಿ ಅಜ್ಜ ಗುರು ಗೋವಿಂದ್ ಸಿಂಗ್ಗೆ ಗುಂಡೇಟು ತಗುಲಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕುಟುಂಬವನ್ನು ಗನ್ನಿಂದ ಉಡಾಯಿಸಿ ಯುವಕ ಆತ್ಮಹತ್ಯೆಗೆ ಶರಣುಕುಟುಂಬಸ್ಥರಾದ ತಂದೆ ಮಂಜೀತ್ ಸಿಂಗ್ (55), ತಾಯಿ ಬಿಂದರ್ ಕೌರ್ (50), ಸಹೋದರಿ ಅಮ್ಜೋತ್ ಕೌರ್ (33), ಅಜ್ಜಿ ಗುರುದೀಪ್ ಕೌರ್ (70), ಸೊಸೆ ಮನೀತ್ ಕೌರ್ (3) ಗೆ ಸಂದೀಪ್ ಸಿಂಗ್ (27) ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಬಳಿಕ ಸಂದೀಪ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಘಟನೆ ನಿಖರ ಕಾರಣ ತಿಳಿದು ಬಂದಿಲ್ಲ. ಸಂದೀಪ್ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಕುರಿತು ಭಾಘಾಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Nathuvala-village ಆದರೆ ಇನ್ನೊಂದು ಮೂಲದ ಪ್ರಕಾರ, ಸಂದೀಪ್ ಸಿಂಗ್ಗೆ ಮದುವೆ ಫಿಕ್ಸ್ ಮಾಡಲಾಗಿತ್ತಂತೆ. ಈತನಿಗೆ ಹಲವು ದೈಹಿಕ ಸಮಸ್ಯೆಗಳು ಇದ್ದ ಕಾರಣ, ಮದುವೆಗೆ ನಿರಾಕರಿಸಿದ್ದ. ಆದರೂ ಮದುವೆಗೆ ಮನೆಯವರು ಒತ್ತಾಯಿಸಿದ್ದರು. ಇದರಿಂದ ಕೋಪಗೊಂಡ ಸಂದೀಪ ಮನೆಯವರನ್ನೆಲ್ಲ ಕೊಂದು ತಾನೂ ಗುಂಡಿಟ್ಟುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಅದೇ ಗ್ರಾಮದ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಪೊಲೀಸರು ತನಿಖೆ ನಡೆಸಿ ಸತ್ಯ ಹೊರ ಹಾಕಬೇಕಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English