- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಡಿಕೇರಿಯಲ್ಲಿ ಅಡಿಕೆ ಕಳವಿಗೆ ಯತ್ನಿಸಿದ ವ್ಯಕ್ತಿಗೆ ಗುಂಡೇಟು : ಸ್ಥಳದಲ್ಲೇ ಸಾವು

ganesh [1]ಮಡಿಕೇರಿ : ಅಡಿಕೆ ಕಳವಿಗೆ ಯತ್ನಿಸಿದನೆನ್ನಲಾದ ಆರೋಪದಲ್ಲಿ ವ್ಯಕ್ತಿಯೋರ್ವನಿಗೆ ಮನೆ ಮಾಲಕ ಗುಂಡಿಕ್ಕಿದ್ದರಿಂದ ಆರೋಪಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ಕರಿಕೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಕರಿಕೆ ನಿವಾಸಿ ದೇವಂಗೋಡಿ ಗಣೇಶ್ ಗುಂಡೇಟಿಗೆ ಬಲಿಯಾದ ವ್ಯಕ್ತಿ.

ಈತ ನಿನ್ನೆ ರಾತ್ರಿ ಮಂದೋಡಿ ಮೋನಪ್ಪ ಎಂಬವರ ಮನೆಯಲ್ಲಿ ಅಡಿಕೆ ಕಳವಿಗೆ ಯತ್ನಿಸಿದಾಗ ಗುಂಡು ಹಾರಿಸಿದ್ದಾರೆ.

ಗುಂಡು ತಗುಲಿ ಗಂಭೀರ ಗಾಯಗೊಂಡಿದ್ದ ಗಣೇಶ್ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಎಂದು ಪೋಲಿಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಭಾಗಮಂಡಲ ಪೋಲಿಸರು ತೆರಳಿ ಪ್ರಕರಣ ತನಿಖೆ ನಡೆಸಿದ್ದಾರೆ.