ತೆಕ್ಕಟ್ಟೆ : ಕುಂದಾಪುರ ತಾಲೂಕಿನ ಹೆಸ್ಕತ್ತೂರು ಗ್ರಾಮದಲ್ಲಿ ಸೆಪ್ಟೆಂಬರ್ 8ರಂದು ನಾಪತ್ತೆಯಾಗಿದ್ದ ಕಟ್ಟಿನ ಬುಡದ ಕನಕ ಕುಲಾಲ್ತಿ ಅವರ ಶವ ಸೋಮವಾರ ಹೆಸ್ಕತ್ತೂರು ಹೊಳೆ ಸೇತುವೆ ಸಮೀಪ ಪತ್ತೆಯಾಗಿದೆ.
ಶನಿವಾರ ತಡರಾತ್ರಿ ಮನೆಯಲ್ಲಿ ಕರೆಂಟ್ ಇಲ್ಲದ ಸಮಯದಲ್ಲಿ ಮೂತ್ರಶಂಕೆಗಾಗಿ ಹೊರಹೋಗಿದ್ದ ಅವರು ಆಕಸ್ಮಿಕವಾಗಿ ಸಮೀಪದ ತೋಡಿಗೆ ಬಿದ್ದಿರುವ ಅನುಮಾನ ವ್ಯಕ್ತವಾಗಿದೆ. ಅಂದು ರಾತ್ರಿಯೇ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ನಂತರ ಎರಡು ದಿನ ಮುಳುಗು ತಜ್ಞರು, ಅಗ್ನಿ ಶಾಮಕ ದಳ ನಿರಂತರ ಶೋಧಕಾರ್ಯ ನಡೆಸಿದ್ರೂ ನೀರಿನ ಒಳಹರಿವು ಹೆಚ್ಚಿದ್ದ ಕಾರಣ ಪ್ರಯೋಜನವಾಗಿರಲಿಲ್ಲ.
ಕನಕ ಅವರ ಮನೆಯ ಬಳಿಯಿರುವ ತೋಡು ಅಲ್ಲೇ ಹರಿಯುವ ಹೊಳೆಗೆ ಸೇರುತ್ತದೆ. ರವಿವಾರ ಈ ಜಾಗದಲ್ಲಿ ಹುಡುಕಾಟ ನಡೆಸಿದ್ದರೂ ನೀರಿನ ಹರಿವು, ಸೆಳೆತ ಹೆಚ್ಚಿದ್ದ ಕಾರಣ ಪತ್ತಯಾಗಿರಲಿಲ್ಲ. ಆದರೆ ಸೋಮವಾರ ಬೆಳಗ್ಗೆ ಏಳು ಗಂಟೆ ಸುಮಾರಿಗೆ ಕನಕ ಅವರ ಶವ ಪತ್ತೆಯಾಗಿದೆ.
Click this button or press Ctrl+G to toggle between Kannada and English