- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮೊಬೈಲ್ ಕಸಿದುಕೊಂಡಿದ್ದಕ್ಕೆ ಮಗ ತಂದೆಯನ್ನೇ ಕೊಲೆ ಮಾಡಿದ

raghuveera [1]ಬೆಳಗಾವಿ : ಮೊಬೈಲ್ ಕಸಿದುಕೊಂಡಿದ್ದಕ್ಕೆ ಮಗ ತನ್ನ ತಂದೆಯ ರುಂಡ ಹಾಗೂ ಕಾಲನ್ನು ಬೇಪರ್ಡಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಕಾಕತಿ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ನಡೆದಿದೆ.

ಕಾಕತಿಯ ಸಿದ್ದೇಶ್ವರ ನಗರದ ಶಂಕರ ದೇವಪ್ಪ ಕುಂಬಾರ(60) ಕೊಲೆಗೀಡಾಗಿದ್ದಾರೆ. ಮನೆಯಲ್ಲಿ ರಾತ್ರಿಯಾದರೂ ಮೊಬೈಲ್ ನಲ್ಲಿ ಆಟ ಅಡುತ್ತಿದ್ದಾಗ ಬೇಗ ಮಲಗು ಎಂದು ಬುದ್ದಿ ಮಾತು ಹೇಳಿ ಮೊಬೈಲ್ ಕಸಿದುಕೊಂಡಿದ್ದಕ್ಕೆ ಮಗ ರಘುವೀರ ತನ್ನ ತಂದೆಯನ್ನೇ ಮನೆಯಲ್ಲಿದ್ದ ಇಳಿಗೆಯಿಂದ ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಕಳೆದ ಮೂರು ತಿಂಗಳ ಹಿಂದೆಯಷ್ಟೇ ಶಂಕರ ಅವರು ಡಿಆರ್ ಪೊಲೀಸ್ ಹುದ್ದೆಯಿಂದ ನಿವೃತ್ತರಾಗಿದ್ದರು. ಮಗ ರಘುವೀರ ಶಂಕರ ಕುಂಬಾರ(25) ಮೂರು ಬಾರಿ ಡಿಪ್ಲೊಮಾ ಪದವಿ ಫೇಲ್ ಆಗಿ ಮನೆಯಲ್ಲಿಯೇ ಇದ್ದನು.

ಸ್ಥಳಕ್ಕೆ ಗ್ರಾಮೀಣ ಎಸಿಪಿ ಶಿವಾರೆಡ್ಡಿ, ಕಾಕತಿ ಇನ್ಸ್ಪೆಕ್ಟರ್ ಎಸ್.ಎಸ್. ಕೌಜಲಗಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.