- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನಾಪತ್ತೆಯಾಗಿದ್ದ ಬಾಬು ಆಚಾರ್ಯ ಪರಪ್ಪಾಡಿ ಹೊಳೆಯಲ್ಲಿ ಶವ ಪತ್ತೆ

kaantavara [1]ಪಳ್ಳಿ : ಒಂದು ವಾರದ ಹಿಂದೆ ನಾಪತ್ತೆಯಾಗಿದ್ದ ಕಾಂತಾವರ ಗ್ರಾಮ ಪಂಚಾಯತ್‌ ವ್ಯಾಪ್ತಿ ನಿವಾಸಿ ಬಾಬು ಆಚಾರ್ಯ (59) ಅವರ ಶವ ಸೋಮವಾರ ಪರಪ್ಪಾಡಿ ಹೊಳೆಯಲ್ಲಿ ಪತ್ತೆಯಾಗಿದೆ.

ತನ್ನ ಮಗನ ಜೊತೆ ವಾಸಿಸುತ್ತಿದ್ದ ಬಾಬು ಆಚಾರ್ಯ ಅವರು ಸೆ.3ರಂದು ನಾಪತ್ತೆಯಾಗಿದ್ದರು. ಮನೆಯ ಸುತ್ತಮುತ್ತ, ಊರಲ್ಲಿ ಹುಡುಕಾಡಿದರೂ ಬಾಬು ಆಚಾರ್ಯ ಅವರ ಪತ್ತೆಯಾಗಿರಲಿಲ್ಲ. ಒಂದು ವಾರದ ಬಳಿಕ ಅಂದರೆ ಸೋಮವಾರ ಬಾಬು ಆಚಾರ್ಯರ ಶವ ಅವರ ಮನೆಯಿಂದ ಎರಡು ಕಿ.ಮೀ ದೂರದಲ್ಲಿ ಅಂದರೆ ಪರಪ್ಪಾಡಿಯ ಶಾಂಭವಿ ಹೊಳೆಯಲ್ಲಿ ಪತ್ತೆಯಾಗಿದೆ.

ಕಾರ್ಕಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದರು.