[1]ಮಂಗಳೂರು : ಮಂಗಳೂರು ನಗರದಲ್ಲಿ ನಿನ್ನೆ ಅ.17 ಸಂಜೆ ಸುರಿದ ಮಳೆಗೆ ಪಂಪ್ವೆಲ್ ಬಳಿ ಟ್ರಾಫಿಕ್ನಲ್ಲಿ ಸಿಕ್ಕಿ ಹಾಕಿಕೊಂಡ ಆ್ಯಂಬುಲೆನ್ಸ್ಗೆ ದಾರಿ ಮಾಡಿಕೊಡುವಂತೆ ಮಾಜಿ ಸಚಿವ ಯು ಟಿ ಖಾದರ್ ವಾಹನ ಸವಾರರಿಗೆ ಸೂಚಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಮಳೆಯಿಂದ ನಗರದ ಪಂಪ್ವೆಲ್ ವೃತ್ತ್ತದಲ್ಲಿ ಟ್ರಾಫಿಕ್ ಜಾಂ ಉಂಟಾಗಿತ್ತು. ಈ ಸಂದರ್ಭ ವಾಹನ ಸಂದನಿಯ ನಡುವೆ ಆಂಬ್ಯುಲೆನ್ಸ್ ಒಂದು ಸಿಕ್ಕಿಕೊಂಡಿತ್ತು. ಈ ಸಂದರ್ಭ ಈ ರಸ್ತೆ ಮೂಲಕ ಸಂಚರಿಸುತ್ತಿದ್ದ ಶಾಸಕ ಯು.ಟಿ. ಖಾದರ್ ತಮ್ಮ ಕಾರಿನಿಂದ ಇಳಿದು ತೆರಳಿ ಟ್ರಾಫಿಕ್ ಕ್ಲೀಯರ್ ಮಾಡುವ ಮೂಲಕ ಆಂಬ್ಯುಲೆನ್ಸ್ ತೆರಳಲು ದಾರಿ ಮಾಡಿಕೊಟ್ಟಿದ್ದಾರೆ.
ಆ ಮೂಲಕ ಶಾಸಕರು ಮಾನವೀಯತೆ ಮೆರೆದಿದ್ದಾರೆ. ಅವರ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ಗಳಿಸಿದ್ದಾರೆ.