- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಗುಳ್ಳಾಡಿ : ತಾನೇ ಸಾಕಿದ ಎತ್ತು ತಿವಿದು ರೈತ ಸಾವು

yetthu [1]ಉಡುಪಿ : ಉಡುಪಿ ಜಿಲ್ಲೆಯ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಳ್ಳಾಡಿಯಲ್ಲಿ ಶುಕ್ರವಾರ ಸಾಕಿದ ಎತ್ತು ತಿವಿದು ಸಾವಯವ ರೈತ ಪದ್ಮನಾಭ ಭಟ್(70)ಸ್ಥಳದಲ್ಲೇ ಕುಸಿದು ಬಿದ್ದರು.

ಸ್ಥಳೀಯರು ಅವರನ್ನು ತಕ್ಷಣ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು. ಕೃಷಿ ಮತ್ತು ಹೈನುಗಾರಿಕೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಇವರು ಎತ್ತನ್ನು ಸಾಕಿದ್ದರು. ಆ ಎತ್ತು ಮದವೇರಿ ಸಾಕಿದ ಯಜಮಾನನಿಗೆ ತಿವಿದಿದೆ.

ಮೃತರು ಪುತ್ರ, ಪುತ್ರಿಯನ್ನು ಅಗಲಿದ್ದಾರೆ.