[1]ಉಜಿರೆ : ಧರ್ಮಸ್ಥಳದಲ್ಲಿ ಹೆಗ್ಗಡೆಯವರ ನಿವಾಸದಲ್ಲಿ (ಬೀಡಿನಲ್ಲಿ) ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ. ಹೆಗ್ಗಡೆ ದಂಪತಿಗೆ ನಮೋಸ್ತು ಶಾಸನ ಸೇವಾ ಸಮಿತಿ ಕರ್ನಾಟಕ ವಿಭಾಗದ ವತಿಯಿಂದ ತ್ಯಾಗಿ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ನಮೋಸ್ತು ಶಾಸನ ಸೇವಾ ಸಮಿತಿಯಅಧ್ಯಕ್ಷರಾದ ಮೈಸೂರಿನ ತೇಜಸ್ವಿನಿ, ಕಾರ್ಯದರ್ಶಿ ಪ್ರವೀಣ್ಚಂದ್ರ, ಮಿತ್ರಸೇನಜೈನ್, ಉಪ್ಪಿನಂಗಡಿ ಮತ್ತು ಡಾ.ಜಯಕೀರ್ತಿ ಜೈನ್, ಧರ್ಮಸ್ಥಳ ಉಪಸ್ಥಿತರಿದ್ದರು.