ಮಂಗಳೂರು : ಪೇಜಾವರ ಶ್ರೀಗಳು ಶ್ರೀಘ್ರ ಗುಣಮುಖವಾಗಲೆಂದು ಎಸ್. ಪ್ರದೀಪಕುಮಾರ ಕಲ್ಕೂರ ಅವರ ನೇತೃತ್ವದಲ್ಲಿ ನಗರದ ಶ್ರೀ ಶರವು ಮಹಾಗಣಪತಿ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಈ ಸಂದರ್ಭ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಡಾ. ವಾಮನ ಶೆಣೈ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ವಿಶ್ವ ಹಿಂದೂ ಪರಿಷತ್ತಿನ ಪ್ರಮುಖ ಎಂ. ಬಿ. ಪುರಾಣಿಕ್, ಉದ್ಯಮಿ ಹಾಗೂ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಉಪಾಧ್ಯಕ್ಷ ರಘುನಾಥ ಸೋಮಯಾಜಿ, ಮಾಜಿ ಮೇಯರ್ ಭಾಸ್ಕರ ಮೊಲಿ, ದಿಯಾ ಸಿಸ್ಟಮ್ನ ಅಧ್ಯಕ್ಷ ಡಾ. ರವಿಚಂದ್ರನ್ ಮತ್ತು ಶ್ರೀಮತಿ ಇಂದಿರಾ ರವಿಚಂದ್ರನ್, ಸ್ಥಾನಿಕ ಸಮಾಜದ ಆಧ್ಯಕ್ಷ ಹರ್ಷ ಕೇದಿಗೆ, ಶಿವಳ್ಳಿ ಸಮಾಜದ ಪ್ರಮುಖ ವಾಸುದೇವ ಭಟ್ ಕಂಜತ್ತೋಡಿ ಕದ್ರಿ, ಹಿರಿಯ ಸಾಹಿತಿ ಕೂಟವಾಣಿ ಸಂಪಾದಕ ಪೊಳಲಿ ನಿತ್ಯಾನಂದ ಕಾರಂತ,ಕೂಟ ಮಹಾ ಜಗತ್ತಿನಚಂದ್ರ ಶೇಖರ ಮಯ್ಯ,ಹವ್ಯಕ ಸಮಾಜದ ಪ್ರಮುಖ ಹಾಗೂ ಲೆಕ್ಕ ಪರಿಶೋಧಕ ಆರ್. ಡಿ. ಶಾಸ್ತ್ರಿ, ರುದ್ರ ಪಠಣ ಸಮಿತಿಯ ರಘುರಾಮ ಭಟ್ ಲ್ಯಾಂಡ್ಲಿಂಕ್ಸ್, ಸುಧಾಕರರಾವ್ ಪೇಜಾವರ, ಪ್ರಭಾಕರರಾವ್ ಪೇಜಾವರ, ಮೊದಲಾದಗಣ್ಯರು ಉಪಸ್ಥಿತರಿದ್ದರು.
ಶರವು ರಾಘವೇಂದ್ರ ಶಾಸ್ತ್ರಿಗಳ ಮಾರ್ಗದರ್ಶನದಲ್ಲಿ ವೇದಮೂರ್ತಿ ಪ್ರಶಾಂತ್ ಆಚಾರ್ಯರು ಪ್ರಾರ್ಥನೆ ಸಲ್ಲಿಸಿದರು. ವಿಪ್ರ ಬಂಧುಗಳು ಗಣಪತಿ ಸ್ತುತಿ ಪಾರಾಯಣ ಪಠಣ ನಡೆಸಿದರು. ಸಾರ್ವಜನಿಕರ ಪರವಾಗಿ ಪ್ರದೀಪಕುಮಾರ ಕಲ್ಕೂರ ಪ್ರಾರ್ಥನೆ ಸಲ್ಲಿಸಿದರು.