ಮಂಗಳೂರು : ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ರಿ. ಮಂಗಳೂರು ಹಾಗೂ ಮಂಗಳೂರು ತಾಲೂಕು ಗ್ರಾಮಾಂತರ ಅಮೆಚೂರು ಕಬಡ್ಡಿ ಅಸೋಸಿಯೇಶನ್ನ ಸಹಭಾಗಿತ್ವದೊಂದಿಗೆ ಟೀಂರ್ಯಾಪರ್ಸ್ ಕುಂಪಲ ಹಮ್ಮಿಕೊಂಡಿದ್ದ ದ.ಕ. ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ಶ್ರೀ ವಿದ್ಯಾಂಜನೇಯ ವ್ಯಾಯಾಮ ಶಾಲೆ, ಉಳ್ಳಾಲ ತಂಡವು ಪ್ರಥಮ ಬಹುಮಾನದ ಟ್ರೋಫಿ ಹಾಗೂ ನಗದು ರೂ 12,000ವನ್ನು ಗೆದ್ದುಕೊಂಡಿದೆ.
ಕಾಪಿಕಾಡ್ನ ಉಮಾಮಹೇಶ್ವರಿ ತಂಡ ದ್ವಿತೀಯ ಸ್ಥಾನಿಯಾಗಿದ್ದು ಟ್ರೋಫಿ ಹಾಗೂ ರೂ. 7,000 ನಗದನ್ನು ಗಳಿಸಿಕೊಂಡಿದೆ. ಶ್ರೀ ವಿದ್ಯಾಂಜನೇಯ ತಂಡದ ಶ್ರೇಯಸ್ ಉಳ್ಳಾಲ ಬೆಸ್ಟ್ ರೈಡರ್ ಹಾಗೂ ನಿತಿನ್ ಕುಮಾರ್ ಉಳ್ಳಾಲ್ ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಯನ್ನು ಪಡೆದರು.