ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆದ ಮನ್ಮಹಾರಥೋತ್ಸವ

9:41 AM, Thursday, January 23rd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

kadri jatre  ಮಂಗಳೂರು : ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಬುಧವಾರ  ಮಧ್ಯಾಹ್ನ ದೇವರು ರಥಾವಹಾರಣಗೊಂಡು ಸಂಜೆ ಮನ್ಮಹಾರಥೋತ್ಸವ ನಡೆಯಿತು.

ಜನವರಿ 15,2020 ರಂದು ಆರಂಭ ಗೊಂಡ ವಾರ್ಷಿಕ ಜಾತ್ರಾಮಹೋತ್ಸವ ಜನವರಿ 25 ರಂದು ಕೊನೆಗೊಳ್ಳಲಿದೆ.

ಬುಧವಾರ  ಮಧ್ಯಾಹ್ನ 12ಗಂಟೆಗೆ ಮಹಾಪೂಜೆ ನಡೆದು, ಮಧ್ಯಾಹ್ನ 1.30ಕ್ಕೆ ದೇವರ ಉತ್ಸವಮೂರ್ತಿ ರಥಾರೋಹಣಗೊಂಡಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.

ಸಂಜೆ ಕದಳಿ ಯೋಗೇಶ್ವರ {ಜೋಗಿ} ಮಠದ ಮಹಾರಾಜರ ನಿರ್ಮಲನಾಥ್ ಜಿ  ಕುದುರೆ ಏರಿ ಆಜ್ಞೆ ಹೊರಡಿಸಿದ ಬಳಿಕ ಮಹಾರಥೋತ್ಸವನ್ನು ಎಳೆಯಲಾಯಿತು.  ಬೆಳ್ಳಿ ರಥೋತ್ಸವ, ಚಂದ್ರಮಂಡಲ ಉತ್ಸವ, ಮಹಾಪೂಜೆ, ಭೂತಬಲಿ ಮತ್ತು ಕವಾಟ ಬಂಧನ ನಡೆಯಿತು.

ತಾ.25ರಂದು ಬೆಳಗ್ಗೆ 10ಗಂಟೆಗೆ ದೇಳವದಿಂದ ಮಲರಾಯ ದೈವದ ಭಂಡಾರ ಹೊರಡುವುದು, ಮಧ್ಯಾಹ್ನ 12ಕ್ಕೆ ಸಂಪ್ರೋಕ್ಷಣೆ, ಶ್ರೀ ಅಣ್ಣಪ್ಪ ದೈವಕ್ಕೆ ವಾರ್ಷಿಕ ಪರ್ವ, 9ಕ್ಕೆ ಮಲರಾಯ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಲಿದೆ .

kadri jatre

kadri jatre

kadri jatre

kadri jatre

kadri jatre

kadri jatre

kadri jatre

kadri jatre

kadri jatre

kadri jatre

kadri jatre

kadri jatre

kadri jatre

kadri jatre

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English