- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕುಂದಾಪುರ : ಮುಂಬೈ ಹೊಟೇಲ್ ಉದ್ಯಮಿ ಹೊಳೆಗೆ ಹಾರಿ ಆತ್ಮಹತ್ಯೆ

Ganesh [1]ಕುಂದಾಪುರ : ಮುಂಬೈಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಕುಂದಾಪುರ ಹೇರಿಕುದ್ರು ಸೇತುವೆಯ ಮೇಲಿನಿಂದ ಪಂಚಗಂಗಾವಳಿ ಹೊಳೆಗೆ ಹಾರಿದ್ದು, ಇವರ ಮೃತದೇಹ ಹೆಮ್ಮಾಡಿ ಸಮೀಪದ ಬುಗ್ರಿಕುಡು ಎಂಬಲ್ಲಿ ಸೋಮವಾರ ಮುಂಜಾನೆ ಪತ್ತೆಯಾಗಿದೆ.

ಮೃತರನ್ನು ಸ್ಥಳಿಯ ಚಿಕನ್‌ಸಾಲ್ ರಸ್ತೆಯ ನಿವಾಸಿ ಕೆ.ಜಿ. ಗಣೇಶ್(49) ಗುರುತಿಸಲಾಗಿದೆ. ಭಾನುವಾರ ಸಂಜೆ ಸುಮಾರಿಗೆ ರಿಕ್ಷಾದಲ್ಲಿ ಬಂದ ಅವರು ಸೇತುವೆ ಮೇಲೆ ಇಳಿದಿದ್ದರು. ತನ್ನ ಆಧಾರ್ ಕಾರ್ಡ್ ಮತ್ತು ಪರ್ಸನ್ನು ಸೇತುವೆ ದಂಡೆ ಮೇಲಿರಿಸಿ ಏಕಾಏಕಿ ನದಿಗೆ ಧುಮುಕ್ಕಿದ್ದರು. ಇದನ್ನು ಕಂಡ ಸಾರ್ವಜನಿಕರ್‍ಯಾರೋ ಬೊಬ್ಬೆ ಹಾಕಿದ್ದಾರೆ, ಕೂಡಲೇ ಸೇರಿದ ಸಾರ್ವಜನಿಕರು ಅವರ ಹುಡುಕಾಟಕ್ಕೆ ತೊಡಗಿದ್ದರು. ಮಾಹಿತಿ ಪಡೆದು ಆಗಮಿಸಿದ ಅಗ್ನಿಶಾಮಕ ದಳದವರೂ ಸಹಾ ಹೊಳೆಯಲ್ಲಿ ಹಲವು ಸುತ್ತಿನ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಇಂದು ಮುಂಜಾನೆ ಶವ ಪತ್ತೆಯಾಗಿದೆ.

ಹಲವು ವರ್ಷಗಳ ಹಿಂದೆ ಮುಂಬೈ ಸೇರಿಕೊಂಡಿದ್ದ ಅವರು ಹಂತ ಹಂತವಾಗಿ ಬೆಳೆದು ಯಶಸ್ವಿ ಹೊಟೇಲ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ಕಳೆದ ಎರಡು ವರ್ಷಗಳ ಹಿಂದೆ ಖಿನ್ನತೆಗೆ ಒಳಗಾಗಿದ್ದ ಅವರು ಊರಿನಲ್ಲಿ ನೆಲೆಸಿದ್ದರು. ಪತ್ನಿ ಎರಡು ಮಕ್ಕಳ ಸುಖಿ ಸಂಸಾರವನ್ನು ಹೊಂದಿದ್ದ ಗಣೇಶ್ ಅವರ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.