- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ತೀಯಾ ಸಮಾಜ ಯು. ಎ. ಇ. ಯ ವಾರ್ಷಿಕ ಮಹಾಸಭೆ ನೂತನ ಅಧ್ಯಕ್ಷರಾಗಿ ರಾಜೇಶ್ ಪಳ್ಳಿಕೆರೆ ಆಯ್ಕೆ

rajesh [1]

ದುಬಾಯಿ : ತೀಯಾ ಸಮಾಜ ಯು. ಎ. ಇ. 2004ರಲ್ಲಿ ದುಬಾಯಿಯ ಜನಪ್ರಿಯ ಸಮಾಜ ಸೇವಕ ದಿ. ಉಮೇಶ್ ನಂತೂರು ಮತ್ತು ಶ್ರೀಮತಿ ಬಿಸಜಾಕ್ಷಿ ಎಂ. ಪಿ. ಯವರ ನೇತೃತ್ವದಲ್ಲಿ ತೀಯಾ ಸಮಾಜ ಮುಂಬಯಿಯ ಮಾಜಿ ಪ್ರಧಾನ ಕಾರ್ಯದರ್ಶಿ, ಪತ್ರಕರ್ತ ಈಶ್ವರ ಎಂ. ಐಲ್ ರಿಂದ ಸ್ಥಾಪನೆಗೊಂಡಿದ್ದು ಇದರ
ಹದಿನಾರನೆಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಜ. 24 ರಂದು ಅಧ್ಯಕ್ಷರಾದ ಮನೀಷ್ ಕರ್ಕೇರ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಸಮಾಜದ ನೂತನ ಅಧ್ಯಕ್ಷರಾಗಿ ರಾಜೇಶ್ ಪಳ್ಳಿಕೆರೆ, ಉಪಾಧ್ಯಕ್ಷರಾಗಿ ಆಮರ್ ನಂತೂರು, ಪ್ರಧಾನ ಕಾರ್ಯದರ್ಶಿಯಾಗಿ ಜಸ್ಮಿತಾ ವಿವೇಕ್, ಕೋಶಾಧಿಕಾರಿಯಾಗಿ ಶ್ರೀನಿವಾಸ ಕೋಟ್ಯಾನ್ ಮತ್ತು ಜೊತೆ ಕೋಶಾಧಿಕಾರಿಯಾಗಿ ಮನೋಹರ ಕೋಟ್ಯಾನ್ ಆಯ್ಕೆಯಾರಿದ್ದಾತೆ.

ಸಮಾಜದ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರೋಶನ್ ಬೋಳಾರ್, ಮನೀಶ್ ಕರ್ಕೇರ, ಧರ್ಮೇಂದ್ರ ಬಂಗೇರ, ಜಗನ್ನಾಥ ಕೋಟ್ಯಾನ್, ಜಗದೀಶ ಕದ್ರಿ, ರಾಜೀವ ಬಿಲ್ಲವ, ಮಹೇಶ್ ರಾಜ್, ಸುರೇಶ್ ಕೋಟ್ಯಾನ್, ಸತೀಶ್ ಕಲ್ಲಾಪು, ಸತೀಶ್ ಪಾಲನ್, ಆದಿತ್ಯ ಬೋಳಾರ್, ಶರ್ಮಿಳಾ ಬೋಳಾರ್, ಚಂದ್ರಿಕ
ರಾಜೀವ, ಸಮಿತ ಬಂಗೇರ, ಗೀತಾ ಪಳ್ಳಿಕೆರೆ, ಅನುಪಮಾ ಕರ್ಕೇರ, ವೀಣಾ ಜಗದೀಶ್, ಲತಾ ಕೋಟ್ಯಾನ್, ಮಲ್ಲಿಕ ಕೋಟ್ಯಾನ್, ನೈನ ಕೋಟ್ಯಾನ್, ಸರಿತ ಕೋಟ್ಯಾನ್, ಪ್ರಿಯಾ ಸಂದೀಪ್ ಇವರನ್ನು ಆಯ್ಕೆಮಾಡಲಾಯಿತು.

ಸಮಾಜದ ಸಾಗರೋತ್ತರ ಪ್ರತಿನಿಧಿಗಳಾಗಿ ಸಮಾಜದ ಸ್ಥಾಪಕ ಹಾಗೂ ಮಾಜಿ ಕೋಶಾಧಿಕಾರಿ ನಾಗೇಶ್ ಸುವರ್ಣ,ಸ್ಥಾಪಕ ಹಾಗೂ ಮಾಜಿ ಉಪಾಧ್ಯಕ್ಷರಾದ ಯೋಗೇಶ್ ಉಳ್ಳಾಲ್ ಮತ್ತು ಸದಾಶಿವ ಮಂಜೇಶ್ವರ್, ಸ್ಥಾಪಕ ಹಾಗೂ ಮಾಜಿ ಪ್ರಧಾನ ಕಾರ್ಯದರ್ಶಿ ಈಶ್ವರ ಎಂ. ಐಲ್, ಕಾರ್ಯಕಾರಿ ಸಮಿತಿಯ ಸ್ಥಾಪಕ ಹಾಗೂ ಮಾಜಿ ಸದಸ್ಯ ರಾಜೇಶ್ ಉಳ್ಳಾಲ್, ಕವಿತ ಉಳ್ಳಾಲ್ ಮತ್ತು ಪಲ್ಲವಿ ದವೆ ಇವರನ್ನು ನೇಮಿಸಲಾಯಿತು. ಸಭೆಯಲ್ಲಿ ಸ್ಥಳೀಯ ತೀಯಾ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.