ಮಾರ್ಚ್ 01ರಂದು ’ಭಕ್ತಿರಥ’ ಸಂತವಾಣಿ ಕಾರ್ಯಕ್ರಮ

10:12 AM, Saturday, February 8th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

bhakti-rath

ಮಂಗಳೂರು : ಮಂಗಳೂರಿನ ಸಂಗೀತ ಭಾರತಿ ಪ್ರತಿಷ್ಠಾನ (ರಿ)ದ ವತಿಯಿಂದ ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನ ಇದರ ರಥೋತ್ಸವ ಪ್ರಯುಕ್ತ ದೇವಸ್ಥಾನದ ರಾಜಾಂಗಣದಲ್ಲಿ ದಿನಾಂಕ 01.03.2020ರ ಭಾನುವಾರ ಸಂಜೆ 5.30ರಿಂದ ’ಭಕ್ತಿರಥ’ ಎಂಬ ಸಂತವಾಣಿ ಸಂಗೀತ ಕಾರ‍್ಯಕ್ರಮ ನಡೆಯಲಿದೆ.

’ಐಡಿಯಲ್ ಐಸ್‌ಕ್ರೀಮ್’ ಸಂಸ್ಥೆಯು ಭಕ್ತಿರಥ ಸಂಗೀತ ಕಾರ‍್ಯಕ್ರಮದ ಮುಖ್ಯ ಪ್ರಾಯೋಜಕರಾಗಿದ್ದು, ಪ್ರತಿ ವರ್ಷ ಜಾತ್ರಾ ಮಹೋತ್ಸವದ ನಂತರದ ಭಾನುವಾರ ಆಯೋಜಿಸಲಾಗುತ್ತಿತ್ತು. ಆದರೆ ಈ ವರ್ಷ ಕಾರಣಾಂತರಗಳಿಂದಾಗಿ ಮಾರ್ಚ್ 01ರಂದು ಆಯೋಜಿಸಲಾಗುತ್ತಿದೆ.

ನಮ್ಮ ದೇಶದ ಉತ್ಕೃಷ್ಟ ಮಟ್ಟದ ಗಾಯಕಿಯಾಗಿರುವ ಬೆಂಗಳೂರಿನ ವಿದುಷಿ ಪೂರ್ಣಿಮಾ ಕುಲರ್ಕಣಿ ಹಾಗೂ ಮುಂಬೈನ ಪಂ|| ಚಂದ್ರಶೇಖರ್ ವಾಜೆ ಇವರು ಈ ಸಂತವಾಣಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಹಾರ್ಮೋನಿಯಂನಲ್ಲಿ ಮಂಗಳೂರಿನ ಶ್ರೀ ನರೇಂದ್ರ ಎಲ್. ನಾಯಕ್, ತಬ್ಲಾದಲ್ಲಿ ರಾಜೇಶ್ ಭಾಗವತ್, ಪಕ್ವಾಜ್‌ನಲ್ಲಿ ಶ್ರೀದತ್ತ್ ಪ್ರಭು, ಮಂಜಿರದಲ್ಲಿ ಧನಶ್ರೀ ಪ್ರಭು ಅವರು ಸಹಕರಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಸಂಗೀತಾ ಸಕ್ತರೆಲ್ಲರಿಗೂ ಮುಕ್ತ ಪ್ರವೇಶಾವಕಾಶವಿದ್ದು, ಸಂಗೀತಾಸಕ್ತರು ಇದರ ಪ್ರಯೋಜನ ಪಡೆಯಬೇಕಾಗಿ ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷರಾದ ಶ್ರೀ ನರೇಂದ್ರ ಎಲ್. ನಾಯಕ್ ಅವರು ಕೋರಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English