ಮಂಗಳೂರು : ಮಹಾಶಿವರಾತ್ರಿಯ ಪ್ರಯುಕ್ತ ಸನಾತನ ಸಂಸ್ಥೆಯ ವತಿಯಿಂದ ಮಂಗಳೂರು ಸಹಿತ ಪುತ್ತೂರು, ಸುಳ್ಯ, ಉಜಿರೆ ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ ಆಧ್ಯಾತ್ಮಿಕ ಗ್ರಂಥಗಳ ಪ್ರದರ್ಶನ ಮತ್ತು ವಿತರಣೆ ಮಳಿಗೆಯನ್ನು ಹಮ್ಮಿಕೊಳ್ಳಲಾಯಿತು. ಮಂಗಳೂರಿನ ಸುಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಶಾಸಕರಾದ ಶ್ರೀ. ವೇದವ್ಯಾಸ ಕಾಮತ್ ಇವರು ಭೇಟಿ ನೀಡಿದರು. ಗ್ರಂಥ ಪ್ರದರ್ಶನಿಯನ್ನು ವೀಕ್ಷಿಸಿದ ಶ್ರೀ. ವೇದವ್ಯಾಸ ಕಾಮತ್ ಇವರು ಅಧ್ಯಾತ್ಮ ಪ್ರಸಾರ ಮಾಡಲು ಸಂಪೂರ್ಣ ಸಹಕಾರವಿದೆ ಎಂದು ಹೇಳಿದರು.
ಈ ಗ್ರಂಥ ಪ್ರದರ್ಶನಿಗೆ ಅನೇಕ ಜಿಜ್ಞಾಸುಗಳು ಭೇಟಿ ನೀಡಿ ಅಧ್ಯಾತ್ಮಿಕ ದೃಷ್ಟಿಯಿಂದ ಶಿವರಾತ್ರಿ ಹೇಗೆ ಆಚರಿಸಬೇಕು. ಶಿವನ ನಿತ್ಯೋಪಾಸನೆ ಹೇಗೆ ಮಾಡಬೇಕು ಮುಂತಾದ ಧಾರ್ಮಿಕ ಕೃತಿಗಳನ್ನು ತಿಳಿದುಕೊಂಡರು.