ಮಡಿಕೇರಿ : ಮರ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಸುಂಟಿಕೊಪ್ಪ ಸಮೀಪದ ಈರಳೆವಳವಾಡಿ ಗ್ರಾಮದ ಅಭ್ಯಾಲ ತೋಟದಲ್ಲಿ ನಡೆದಿದೆ.
ನಾಕೂರು ಗ್ರಾಮದ ಉಮೇಶ್ ಎಂಬುವವರು ಇಂದು ಬೆಳಗ್ಗೆ ಸಹ ಕಾರ್ಮಿಕರೊಂದಿಗೆ ಮರವೊಂದನ್ನು ಕಡಿಯುವ ಕೆಲಸದಲ್ಲಿ ತೊಡಗಿದ್ದರು. ಮರಕ್ಕೆ ಕಟ್ಟಲಾಗಿದ್ದ ಹಗ್ಗವನ್ನು ಹಿಡಿದು ಎಳೆಯುತ್ತಿದ್ದಾಗ ಆಯತಪ್ಪಿ ಬಿದ್ದಿದ್ದಾರೆ. ದುರಾದೃಷ್ಟವಶಾತ್ ಅವರ ಮೇಲೆಯೇ ಮರ ಬಿದ್ದು, ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದರು.
Click this button or press Ctrl+G to toggle between Kannada and English