ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಣೆಯ 81ನೇ ಮದಿಪು ತ್ರೈಮಾಸಿಕ ಸಂಚಿಕೆ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಅಕಾಡೆಮಿಯ ಸಿರಿ ಚಾವಡಿಯಲ್ಲಿ ದಿನಾಂಕ: 09.03.2020 ರಂದು ನಡೆಯಿತು.
ಅಧ್ಯಕ್ಷರಾದ ಶ್ರೀ ದಯಾನಂದ ಜಿ. ಕತ್ತಲ್ಸಾರ್ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ತುಳುನಾಡಿನ ಶ್ರೇಷ್ಠ ಸಾಹಿತಿಗಳ ಜ್ಞಾನದ ಸಿರಿತುಪ್ಪೆ -ಮದಿಪು. ಹೊಸ ಹೊಸ ಯವ ಸಾಹಿತಿಗಳ/ ಕವಿಗಳ ಕವಿತೆ, ಕಥೆ, ಹನಿಕವನಗಳನ್ನು ಒಟ್ಟುಗೂಡಿಸಿ ಮದಿಪು ತ್ರೈಮಾಸಿಕ ಸಂಚಿಕೆಯನ್ನು ತುಳು ಸಾಹಿತ್ಯ ಅಕಾಡೆಮಿಯು ಪ್ರಕಟಿಸುತ್ತಿದೆ. ತುಳು ಭಾಷೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಮದಿಪು ಸಂಚಿಕೆಯ ಲೇಖನಗಳು ಸಹಕಾರಿಯಾಗಿದೆ. ಮದಿಪು ಆಜೀವ ಚಂದಾದಾರರಾಗಲು ರೂ.500/-ನ್ನು ಪಾವತಿಸಿದರೆ, ಜೀವನಾವಧಿಯವರೆಗೂ ತಮ್ಮ ಕೈ ಸೇರುತ್ತದೆ. ಹಾಗೆಯೇ ತುಳು ಅಧಿಕೃತ ರಾಜ್ಯ ಭಾಷೆಯಾಗಬೇಕು ಮತ್ತು ೮ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಬೇಕು ಎಂಬ ನಿಲುವನ್ನು ಅಧ್ಯಕ್ಷರು ಈ ಸಮಯದಲ್ಲಿ ಸ್ಪಷ್ಟಪಡಿಸಿದರು.
ಶ್ರಿ ಪ್ರಭಾಕರ್ ಸೋಮಯಾಜಿ, ನಿವೃತ್ತ ಕರ್ನಾಟಕ ಪವರ್ ಕಾರ್ಪೋರೇಶನ್ ಸಹಾಯಕ ಕಾರ್ಯಪಾಲಕ ಅಭಿಯಂತರರು, ಶ್ರೀ ಎಡ್ವರ್ಡ್ ಸಿಕ್ವೇರಾ ಉದ್ಯಮಿ, ಶ್ರೀ ಎನ್. ವಿಠಲ ಶಾಸ್ರಿ, ನಿವೃತ್ತ ಅಧೀಕ್ಷಕರು, ಶ್ರೀ ಬಸವರಾಜ್ ಕ್ಯಾಲೂರು, ಉದ್ಯಮಿ ಇದ್ದರು. ಅಕಾಡೆಮಿ ಸದಸ್ಯರಾದ ನಿಟ್ಟೆ ಶಶಿಧರ್ ಶೆಟ್ಟಿ ಇವರು ಈ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ರಿಜಿಸ್ಟ್ರಾರ್ ರಾಜೇಶ್ ಜಿ. ಸ್ವಾಗತಿಸಿ, ಕೊನೆಗೆ ವಂದನೆಯನ್ನು ಮಾಡಿದರು.
Click this button or press Ctrl+G to toggle between Kannada and English