ಮಂಗಳೂರು : ನಗರದ ಬಿಜೈ ಬಳಿ ಬೈಕ್ ಸ್ಕಿಡ್ನಿಂದಾಗಿ ಗಂಭೀರ ಗಾಯಗೊಂಡ ನಗರದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ರಾಮನಗರ ಜಿಲ್ಲೆಯ ಕುಶಾಲ್ ಕುಮಾರ್ (19) ಮೃತಪಟ್ಟ ವಿದ್ಯಾರ್ಥಿ.
ಗುರುವಾರ ಬೆಳಗ್ಗೆ ಕುಶಾಲ್ ಅವರು ತನ್ನ ಪಿಜಿಯಿಂದ ಬೈಕ್ನಲ್ಲಿ ಜಿಮ್ಗೆ ಹೋಗುತ್ತಿದ್ದಾಗ ಬಿಜೈ-ಕೆಎಸ್ಸಾರ್ಟಿಸಿ ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿದೆ. ಇದರ ಪರಿಣಾಮ ತಲೆಯ ಹಿಂಭಾಗಕ್ಕೆ ಗಂಭೀರ ಗಾಯವಾಗಿದ್ದು, ಕೂಡಲೇ ಸ್ಥಳೀಯರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಅಂಗಾಂಗ ದಾನ: ಕುಶಾಲ್ ಕುಮಾರ್ ಕುಟುಂಬ ಗುರುವಾರವೇ ಮಂಗಳೂರಿಗೆ ಆಗಮಿಸಿದೆ. ಮೃತಪಟ್ಟ ವಿದ್ಯಾರ್ಥಿಯ ಕಿಡ್ನಿ, ಕಣ್ಣು ಸೇರಿದಂತೆ ಇತರ ಅಂಗಾಂಗಗಳನ್ನು ದಾನ ಮಾಡಲು ಅವರ ಕುಟುಂಬ ನಿರ್ಧರಿಸಿದೆ. ಬೆಂಗಳೂರು ವೈದ್ಯರ ತಂಡ ಶುಕ್ರವಾರ ರಾತ್ರಿ ಮಂಗಳೂರಿಗೆ ಆಗಮಿಸಿ ಅಂಗಾಂಗ ದಾನ ಪ್ರಕ್ರಿಯೆ ಮುಗಿಸಿದೆ.
ಮರಣೋತ್ತರ ಪರೀಕ್ಷೆ : ಮೃತದೇಹದ ಮರಣೋತ್ತರ ಪ್ರಕ್ರಿಯೆ ನಡೆಯುತ್ತಿದ್ದು, ಬಳಿಕ ದೇಹವನ್ನು ಕುಟುಂಬಿಕರಿಗೆ ಹಸ್ತಾಂತರಿಸಲು ನಿರ್ಧರಿಸಲು ನಿರ್ಧರಿಸಲಾಗಿದೆ.
ಕುಶಾಲ್ ತಂದೆ ರಾಮನಗರದಲ್ಲಿ ವಕೀಲರಾಗಿದ್ದಾರೆ. ತಾಯಿ, ಅಕ್ಕ-ತಂಗಿ ಇದ್ದಾರೆ.
ನಗರದ ಕದ್ರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.