ಮಾರ್ಚ್ 21 : ಮೂಡ್ಲಕಟ್ಟೆಯಲ್ಲಿ ಗೃಹ ಪ್ರವೇಶದ ಪ್ರಯುಕ್ತ ’ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ’ ಯಕ್ಷಗಾನ, ಸನ್ಮಾನ

2:35 PM, Tuesday, March 17th, 2020
Share
1 Star2 Stars3 Stars4 Stars5 Stars
(No Ratings Yet)
Loading...

maranakatteಕುಂದಾಪುರ  : ಕಾಡಿನಕೊಂಡ ಮೂಡ್ಲಕಟ್ಟೆಯಲ್ಲಿ ಶ್ರೀ ದಿನಕರ ಮತ್ತು ಶ್ರೀಮತಿ ರಾಜಶ್ರೀ ಬಳ್ಕೂರು ಇವರ ಮನೆಯ ನೂತನ ಗೃಹ ಪ್ರವೇಶದ ಪ್ರಯುಕ್ತ ದಿನಾಂಕ 21-03-2020 ರಂದು ಶ್ರೀ ಬ್ರಹ್ಮಲಿಂಗೇಶ್ವರ ದಶಾವತಾರ ಯಕ್ಷಗಾನ ಮೇಳ ಮಾರಣಕಟ್ಟೆ ಇವರಿಂದ ’ಮಾರಣಕಟ್ಟೆಕ್ಷೇತ್ರ ಮಹಾತ್ಮೆ’ಎಂಬ ಯಕ್ಷಗಾನ ನಡೆಯಲಿದೆ.

ಇದೇ ಸಂದರ್ಭ ಜಿಲ್ಲಾ ಕನ್ನಡರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸೌಕೂರು ವಾದ್ಯ ವಾದಕ ಶ್ರೀ ಗೋಪಾಲ ದೇವಾಡಿಗ ಮತ್ತುಮಾರಣಕಟ್ಟೆಮೇಳದ ಹಿರಿಯ ಕಲಾವಿದರಾದ ಶ್ರೀ ಕೊಳಾಳಿ ಕೃಷ್ಣ ಶೆಟ್ಟಿ, ಶ್ರೀ ನಂದೀಶ್ ಮೊಗವೀರ ಜನ್ನಾಡಿ, ಮೇಳದ ನೇಪಥ್ಯ ಕಲಾವಿದರಾದ ಮೊಳಳ್ಳಿ ಶ್ರೀ ರಮೇಶ ಮರಾಠ, ಗೋಳಿಹೊಳೆ ಶ್ರೀ ರಾಮ ನಾಯ್ಕ ಇವರನ್ನು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರಾದ ಶ್ರೀ ಬಿ.ಅಪ್ಪಣ್ಣ ಹೆಗ್ಡೆ ಅವರು ಸನ್ಮಾನಿಸಲಿದ್ದಾರೆ ಎಂದು  ಬಳ್ಕೂರು ಪ್ರತಿಷ್ಠಾನದ ಅಧ್ಯಕ್ಷ ಕರುಣಾಕರ ಬಳ್ಕೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

brahmalingeshwara

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English