- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೊರೋನಾ ಬಂದೈತೀ ಅಣ್ಣಾ ಎಚ್ಚರಗೊಳ್ಳಣ್ಣ

corona [1]ನಮ್ಮ ನಾಡಿಗೆ ಕೊರೋನಾ ಬಂದೈತೀ
ಅಣ್ಣಾ ಎಚ್ಚರಗೊಳ್ಳಣ್ಣ
ಭಯ – ಭೀತಿ ಯಾಕಣ್ಣ
ಸ್ವಚ್ಛತೆಯಾ ಕಾಪಾಡಣ್ಣ .

ಮಾಸ್ಕನು ಮುಖಕ್ಕೆ ಧರಿಸು
ಒಳಗಿನ ಅಹಂ ನೀ ಸರಿಸು ,
ಸ್ವಚ್ಛತೆಯ ನೀ ಸ್ಮರಿಸು
ಬಳಿ ಸುಳಿಯಲ್ಲಾ ಯಾವ ವೈರಸ್ಸು .

ಅಕ್ಕ ಪಕ್ಕದವರಿಗೆ ತಿಳಿಸು
ಈ ನಾಡನು ನೀ ಉಳಿಸು

ವಿದೇಶದಲ್ಲಿ ಹೆಚ್ಚು ಹರಡೈತೀ
ಸಾವಿನ ಸಂಖ್ಯಿ ಮುಗಿಲು ಮುಟೈತೀ,
ಯಾಮಾರಿದರ ನಿನ್ನ ಬಳಿಗೂ ಬರುತೈತೀ
ಸಾವಿನ ಭಯ ತರುತೈತೀ
ನಿನ್ನ ಸ್ವಯಂ ಸ್ವಚ್ಛತೆಯೇ
ಇದಕ್ಕ ಮದ್ದು ಆಗೈತೀ.

Manjunath [2]

 

ರಚನೆ:
ಮಂಜುನಾಥ ಗುತ್ತೇದಾರ
ರಾಯಚೂರು.
ಮೊಬೈಲ್ ಸಂಖ್ಯೆ 9632759691
ಇಮೇಲ್- manjunatha071@gmail