[1]ಮಂಗಳೂರು : ಗುರುಪುರ ಹಾಗೂ ಸುರತ್ಕಲ್ ಹೋಬಳಿಯ ಗ್ರಾಮಾಂತರ ಪ್ರದೇಶದಲ್ಲಿದ್ದ ಹೊರ ಜಿಲ್ಲೆಯ ಕಾರ್ಮಿಕರನ್ನು ಅವರ ಊರುಗಳಿಗೆ ಒಟ್ಟು 35 ಬಸ್ಸುಗಳಲ್ಲಿ ಗುರುಪುರ ಕೈಕಂಬ ಹಾಗೂ ಬಜಪೆ ಯಿಂದ ಬುಧವಾರ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ರಾತ್ರಿ ವೇಳೆಯಲ್ಲಿ ಕೊಂಡೊಯ್ಯಲಾಯಿತು.
ಬಜಪೆಯಲ್ಲಿ ಸುರತ್ಕಲ್ ಹೋಬಳಿಯ 11 ಬಸ್ಸುಗಳಲ್ಲಿ 243 ಕಾರ್ಮಿಕರು, ಗುರುಪುರ ಹೋಬಳಿಯಿಂದ 24 ಬಸ್ಸುಗಳಲ್ಲಿ 506 ಕಾರ್ಮಿಕರನ್ನು ಅವರ ಗ್ರಾಮಗಳಿಗೆ ಕೊಂಡೊಯ್ಯಲಾಯಿತು. ವಲಸೆ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿದ ಬಳಿಕ ಅವರಿಗೆ ಮಾಸ್ಕ್ ನೀಡಿ, ಬಸ್ಗಳಲ್ಲಿ ಕೂಡ ಸಾಮಾಜಿಕ ಅಂತರ ಕಾಪಾಡುವಂತೆ ಆಸನಗಳ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಡಾ ಭರತ್ ಶೆಟ್ಟಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು.