[1]ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ, ಜೂನ್ 21ರಂದು ಏಳು ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ರೋಗಿ ಸಂಖ್ಯೆ 6619 ವ್ಯಕ್ತಿಯ ಸಂಪರ್ಕದಿಂದ ಇಬ್ಬರಲ್ಲಿ ಸೋಂಕು ದೃಢಪಟ್ಟಿದ್ದರೆ. ಮೂವರು ಕುವೈಟ್ ನಿಂದ ಮರಳಿದವರಾಗಿದ್ದಾರೆ. ಇನ್ನುಳಿದಂತೆ ಪುತ್ತೂರಿನ ಒಬ್ಬರಿಗೆ ಐಎಲ್ ಐನಿಂದ ಸೋಂಕು ದೃಢಪಟ್ಟರೆ, ಬೆಳ್ತಂಗಡಿ ನಿವಾಸಿಯೊಬ್ಬರಿಗೆ ಎಸ್ ಆರ್ ಐನಿಂದ ಸೋಂಕು ತಗುಲಿದೆ.
ಭಾನುವಾರ ಉಡುಪಿ ಜಿಲ್ಲೆ ಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ.
ಇನ್ನು ಉಡುಪಿ ಜಿಲ್ಲೆಯಲ್ಲಿ 12 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸದ್ಯ ಜಿಲ್ಲೆಯಲ್ಲಿ 97 ಸಕ್ರಿಯ ಪ್ರಕರಣಗಳಿವೆ. ಇನ್ನು ಜಿಲ್ಲೆಯಲ್ಲಿ ಒಟ್ಟು ಪತ್ತೆಯಾದ 1061 ಮಂದಿ ಸೋಂಕಿತರ ಪೈಕಿ ಸದ್ಯ 965 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಭಾನುವಾರ ದಂದು ಲಭ್ಯವಾದ 27 ಮಂದಿಯ ಎಲ್ಲಾ ವರದಿಗಳು ನೆಗೆಟಿವ್ ಆಗಿವೆ.