ದಿನ ಭವಿಷ್ಯ : ಖ್ಯಾತ ಜ್ಯೋತಿಷಿ ಗಿರಿಧರಭಟ್ ಅವರಿಂದ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ

6:00 AM, Tuesday, July 21st, 2020
Share
1 Star2 Stars3 Stars4 Stars5 Stars
(5 rating, 1 votes)
Loading...

subrahmanyaಶ್ರೀ ಸುಬ್ರಹ್ಮಣ್ಯ ಸ್ವಾಮಿ ಸ್ಮರಣೆ ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ. ಖ್ಯಾತ ಜ್ಯೋತಿಷ್ಯರು ಗಿರಿಧರಭಟ್  ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. 9945410150

ಮೇಷ ರಾಶಿ
ಮನಸಿಗೆ ಬೇಸರವಾಗುವ ಸಂಗತಿಗಳು ನಡೆಯಬಹುದು. ನಿಮ್ಮಲ್ಲಿ ಭಯಭೀತ ವಾತಾವರಣ ತುಂಬಿರುತ್ತದೆ. ಕಾಲಹರಣ ಮಾಡುವುದು ಒಳಿತಲ್ಲ, ಧೈರ್ಯೇ ಸಾಹಸೇ ಲಕ್ಷ್ಮಿ ಎಂಬ ಉಕ್ತಿಯಂತೆ ಮುನ್ನಡೆಯಿರಿ, ಯಶಸ್ಸು ಖಂಡಿತ ದೊರೆಯಲಿದೆ. ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ಆತ್ಮೀಯರ ಬಳಿ ಪ್ರಸ್ತಾಪ ಮಾಡಿ ಪರಿಹಾರದ ಮಾರ್ಗಗಳನ್ನು ಹುಡುಕಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಹಣ ಗಳಿಕೆಗಾಗಿ ಅಡ್ಡದಾರಿ ಹಿಡಿಯುವುದು ತಪ್ಪು. ಉತ್ತಮ ನಿಲುವುಗಳನ್ನು ತೆಗೆದುಕೊಂಡು ಕಾರ್ಯೋನ್ಮುಖರಾಗಿ. ಕೆಲವರು ಸುಮ್ಮನೆ ನಿಮಗೆ ತೊಂದರೆ ನೀಡಬಹುದು ಅಥವಾ ನಿಮ್ಮ ದಾರಿಗೆ ಅಡ್ಡಲಾಗಿ ನಿಲ್ಲಬಹುದು ಆದಷ್ಟು ಎಚ್ಚರಿಕೆಯಿಂದ ಕಾರ್ಯಸಾಧನೆ ಮಾಡಿಕೊಳ್ಳಿ. ನಿಮ್ಮ ಕೆಲವೊಂದು ಯೋಜನೆಗಳಿಗೆ ಸಹಕಾರ ಕೇಳುವುದು ತಪ್ಪಲ್ಲ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನಿಮ್ಮ ದೃಢ ನಿರ್ಧಾರಗಳು ಕೆಲಸದ ಯಶಸ್ಸಿಗೆ ಸಹಕಾರ ಆಗಲಿದೆ. ಕುಟುಂಬದಲ್ಲಿ ಅನಗತ್ಯವಾಗಿ ಸಂಶಯದ ವಾತಾವರಣ ತರುವುದು ಸರಿಯಲ್ಲ. ಈ ದಿನ ಅತ್ಯಂತ ಆಶ್ಚರ್ಯವಾದ ಘಟನೆಗಳು ನಡೆಯಬಹುದಾದ ಸಾಧ್ಯತೆ ಇದೆ. ದೈವ ಪ್ರೇರಣೆಗೆ ಮೊರೆ ಹೋಗಲಿದ್ದೀರಿ. ನಿಮ್ಮಿಂದ ಹಲವರು ಸಹಾಯ ಬಯಸಿ ಬರಬಹುದು ನಿಮ್ಮ ಕೈಲಾದಷ್ಟು ಸಹಾಯ ಮಾಡುವುದು ಒಳಿತು ನಿರಾಶೆ ಮಾಡಬೇಡಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ನಿರೀಕ್ಷಿತ ಕಾರ್ಯಗಳಲ್ಲಿ ಜಯ ಕಂಡುಬರುತ್ತದೆ. ಈ ದಿನ ಹೆಚ್ಚುವರಿ ಕೆಲಸದಿಂದ ಲಾಭ ಸಿಗಲಿದೆ. ಭೂ ಸಂಬಂಧಿತ ವ್ಯವಹಾರಗಳಲ್ಲಿ ಜಯ ಕಂಡುಬರುತ್ತದೆ. ಹಳೆಯ ವ್ಯಾಜ್ಯಗಳು ಹಿರಿಯರ ಮಧ್ಯಸ್ಥಿಕೆಯಲ್ಲಿ ಬಗೆಹರಿಯುವುದು ನಿಶ್ಚಿತ. ಸಂಗಾತಿಯೊಡನೆ ಪ್ರವಾಸದ ಚಿಂತನೆ ಮಾಡುವಿರಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ನಿಮ್ಮಲ್ಲಿ ಆತುರತೆ ಹೆಚ್ಚಾಗಬಹುದು ಅನಗತ್ಯವಾಗಿ ಸಮಯ ಹಾಳು ಮಾಡುತ್ತಾ ಕುಳಿತುಕೊಳ್ಳಬೇಡಿ, ಏನಾದರೂ ಕೆಲಸ ಮಾಡಿಕೊಳ್ಳುವುದು ಉತ್ತಮ. ಈ ದಿನ ಕಳೆದು ಹೋಗಿರುವ ವಸ್ತುಗಳು ಸಿಗುವ ಸಾಧ್ಯತೆ ಕಂಡುಬರುತ್ತದೆ. ಮಾನಸಿಕ ಹಾಗೂ ದೈಹಿಕ ಸಮತೋಲನವನ್ನು ಕಾಪಾಡಿಕೊಳ್ಳಿ. ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಹೆಚ್ಚುವರಿ ಜವಾಬ್ದಾರಿಗಳು ಸಿಗಲಿದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಮನಸ್ಸಿನ ಚಂಚಲತೆಗೆ ಆಸ್ಪದ ನೀಡಬೇಡಿ. ನಿಮ್ಮಲ್ಲಿ ಮೂಡುವ ಆಲೋಚನೆಗಳು ಉತ್ತಮವಾಗಿರಲಿ ಅದನ್ನು ಸಕಾರಾತ್ಮಕ ಗೊಳಿಸಲು ಧೈರ್ಯದಿಂದ ಮುನ್ನಡೆಯಿರಿ. ವೈಯಕ್ತಿಕ ಸಮಸ್ಯೆಗಳಿಂದ ನಿಮ್ಮಲ್ಲಿ ಕಳಾಹೀನ ವಾಗಬಹುದು ಸಮಸ್ಯೆಗಳಿಗೆ ಪರಿಹಾರ ಇದೆ ಅವುಗಳನ್ನು ಹುಡುಕಿ. ಸ್ನೇಹಿತರೊಡನೆ ಮನಸ್ತಾಪ ವಾಗುವ ಬರಬಹುದು ಆದಷ್ಟು ವಿವೇಚನೆಯಿಂದ ವರ್ತಿಸಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ವೃತ್ತಿಪರತೆಯ ನಿಮ್ಮ ವಿಚಾರಗಳನ್ನು ಎಲ್ಲರೂ ಮೆಚ್ಚುವರು. ಸೇವಾವಲಯದಲ್ಲಿ ಕ್ರಿಯಾಶೀಲತೆ ಚಟುವಟಿಕೆ ನಡೆಯಲಿದೆ. ಸಹಾಯ ಅಪೇಕ್ಷಿಸಿ ಕೆಲವರು ಬರಬಹುದು, ನಿಮ್ಮಿಂದ ಸಕಾರಾತ್ಮಕ ಪ್ರತಿಕ್ರಿಯೆ ಇರಲಿ. ಉತ್ತಮ ಅವಕಾಶಗಳ ಜೊತೆಗೆ ಅಧಿಕ ಧನ ಲಾಭವಾಗುವ ಯೋಜನೆಗಳು ಸಿಗಬಹುದಾದ ಸಾಧ್ಯತೆ ಇದೆ. ಬಾಳಸಂಗಾತಿಯ ಒಲುಮೆ ನಿಮ್ಮ ಎಲ್ಲಾ ಜಂಜಾಟಗಳನ್ನು ತೆಗೆದುಹಾಕಲು ಪ್ರಯತ್ನಿಸುತ್ತದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಈ ದಿನ ಪ್ರೇಮಿಗಳಿಗೆ ವಿಶೇಷ ದಿನ ವಾಗಲಿದೆ, ಅವರ ಪ್ರೇಮ ಸಾಕ್ಷಾತ್ಕಾರ ಕಾಣಬಹುದಾಗಿದೆ. ನಿಮ್ಮ ಜ್ಞಾನ ಮಟ್ಟದಿಂದ ಉತ್ತಮ ಸಾಧನೆ ರೂಪರೇಷೆ ಮಾಡುವಿರಿ. ಶೈಕ್ಷಣಿಕ ಸಂಬಂಧಪಟ್ಟ ವಿಚಾರಗಳಲ್ಲಿ ಉತ್ತಮ ನಿರ್ವಹಣೆ ತೋರುವಿರಿ. ಕೆಲಸದಲ್ಲಿ ಬಡ್ತಿಯ ಭಾಗ್ಯ ಆಗುವುದು ಖಚಿತವಾಗುತ್ತದೆ. ಕುಟುಂಬದ ಕಾರ್ಯಗಳಿಗೆ ಸಾಧ್ಯವಾದಷ್ಟು ಸಹಾಯ ಮಾಡುವ ಗುಣವನ್ನು ಬೆಳೆಸಿಕೊಳ್ಳಿ, ನಿಮ್ಮ ವರ್ಚಸ್ಸು ಹೆಚ್ಚುತ್ತದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಕೆಲಸದ ಬಗೆಗಿನ ವಿಷಯಗಳಲ್ಲಿ ಉತ್ತಮ ಫಲಿತಾಂಶ ಕಂಡು ಬರುತ್ತದೆ. ಕುಟುಂಬದ ಹಿತಾಸಕ್ತಿಗಾಗಿ ವಿಶೇಷ ಯೋಜನೆಗಳು ಮಾಡುವ ಸಿದ್ಧತೆ ನಡೆಸುತ್ತೀರಿ. ನಿಮ್ಮನ್ನು ಗೌರವಿಸುವವರನ್ನು ಅವರ ಹಿತಾಸಕ್ತಿಯೇ ಕಾಪಾಡಿ. ಅವರ ಮನ ನೋಯಿಸದಂತೆ ನೋಡಿಕೊಳ್ಳಿ. ನಿಮ್ಮ ಬಗೆಗಿನ ಭಾವನೆ ಮತ್ತಷ್ಟು ಉತ್ತಮ ಪಡಿಸಿಕೊಳ್ಳಿ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಆರ್ಥಿಕವಾಗಿ ನಿಮ್ಮ ಆದಾಯ ಸಂಪದ್ಭರಿತವಾಗಿದೆ, ಆದರೆ ವಿನಾಕಾರಣ ಮಾಡುವ ದುಂದುವೆಚ್ಚ ನಿಮ್ಮ ವ್ಯವಸ್ಥೆಯನ್ನು ಕುಂಠಿತಗೊಳಿಸಬಹುದು ಎಚ್ಚರ. ಬಂದಂತಹ ಹಣವನ್ನು ಉತ್ತಮ ಹೂಡಿಕೆ ಅಥವಾ ಉಳಿತಾಯಗಳಿಗೆ ವಿನಿಯೋಗಿಸಿ. ನಿಮ್ಮ ಬಾಳಸಂಗಾತಿಗಾಗಿ ಆಭರಣ ಖರೀದಿಗೆ ನಡೆಸುವಿರಿ. ಮಕ್ಕಳ ವಿದ್ಯೆಯಲ್ಲಿ ಪ್ರಗತಿ ಕಂಡುಬರುತ್ತದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕೆಲಸವಿಲ್ಲದ ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ದೊರೆಯುವ ಸಾಧ್ಯತೆ ಈ ದಿನ ಕಾಣಬಹುದು. ಕೆಲಸಕಾರ್ಯಗಳಲ್ಲಿ ವೇಗ ಪಡೆಯಲಿದೆ ಹಾಗೂ ಸುಲಭವಾಗಿ ಯಾವುದೇ ಅಡ್ಡಿ ಆತಂಕವಿಲ್ಲದೆ ನೆರವೇರುವುದು ಈ ದಿನದ ವಿಶೇಷತೆ. ಕುಟುಂಬದ ಕೆಲವು ವೈಯುಕ್ತಿಕ ನಿಲುವುಗಳನ್ನು ಪಡೆಯುವ ಮೊದಲು ಹಿರಿಯರ ಮಾರ್ಗದರ್ಶನ ಅನುಸರಿಸುವುದು ಒಳ್ಳೆಯದು. ನಿಮ್ಮ ಕೆಲವು ವಿಷಯಗಳಲ್ಲಿ ಸಾಮರ್ಥ್ಯ ಹಾಗೂ ದೃಷ್ಟಿಕೋನ ರೂಪಿಸುವಂತಹ ಅವಕಾಶಗಳು ಸಿಗಲಿದೆ ಇದರಿಂದ ನಿಮ್ಮ ಯೋಜನೆಗಳಿಗೆ ಹೊರಗಿನಿಂದ ಬೆಂಬಲ ಸಿಗಬಹುದು ಹಾಗೂ ನಿಮ್ಮ ವ್ಯವಸ್ಥೆಯನ್ನು ಮನಗಂಡು ಹೆಚ್ಚಿನ ಕೆಲಸ ನೀಡುವ ಸಾಧ್ಯತೆ ಇದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಇಂದು ಕ್ರೀಡಾ ಚಟುವಟಿಕೆಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಅತ್ಯುತ್ತಮವಾಗಿ ಮೂಡಿಬರಲಿದೆ. ಸಂಗಾತಿಯೊಡನೆ ಸುತ್ತಾಡುವ ಸಾಧ್ಯತೆ ಕಂಡುಬರುತ್ತದೆ, ಅವರ ಮನೋಭಾವನೆಗಳಿಗೆ ನಿಮ್ಮಿಂದ ಸೂಕ್ತ ಸ್ಪಂದನೆ ಸಿಗಲಿದೆ. ಮಾನಸಿಕ ಗೊಂದಲಗಳು ನಿಮಗೆ ಆವರಿಸಬಹುದು. ಸ್ನೇಹಿತ ವರ್ಗದಿಂದ ಅನಗತ್ಯ ಕಿರುಕುಳ ಎದುರಿಸಬೇಕಾದ ಪ್ರಮೇಯ ಬರಲಿದೆ. ನಿಮ್ಮ ಕೆಲವು ಯೋಜನೆಗಳು ಸೂಕ್ತವಾದ ಬಂಡವಾಳವಿಲ್ಲದೆ ಹಳ್ಳ ಹಿಡಿಯಬಹುದಾದ ಸಾಧ್ಯತೆ ಕಂಡುಬರುತ್ತದೆ.
ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಹಣಕಾಸು, ಸಾಲಬಾದೆ, ಪ್ರೇಮ ವಿಚಾರ, ದಾಂಪತ್ಯ, ಶತ್ರುಬಾಧೆ, ಕೌಟುಂಬಿಕ ಸಮಸ್ಯೆ ಇನ್ನೂ ಹತ್ತು ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆ ಮಾಡಿ.
9945410150

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English