[1]ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 16 ರಿಂದ ಒಂದು ವಾರ ವಿಧಿಸಲಾಗಿದ್ದ ಲಾಕ್ಡೌನ್ನ್ನುಜುಲೈ 23ಕ್ಕೆ ತೆರವುಗೊಳಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದಾರೆ.
ಸದ್ಯ ಜಾರಿಯಲ್ಲಿರುವ ಲಾಕ್ಡೌನ್ನ್ನು ಮುಖ್ಯಮಂತ್ರಿ ಸೂಚನೆ ಮೇರೆಗೆ ಜು.22ರಂದು ರಾತ್ರಿವರೆಗೆ ಇರಲಿದೆ. ಜು.23ರಂದು ಬೆಳಗ್ಗೆ 5ಗಂಟೆಯಿಂದ ಲಾಕ್ಡೌನ್ ತೆರವುಗೊಳ್ಳಲಿದ್ದು, ಅಂದು ಎಲ್ಲ ಅಂಗಡಿ-ಮುಂಗಟ್ಟುಗಳು ಸಂಪೂರ್ಣವಾಗಿ ತೆರೆಯಲಿವೆ. ವಾಣಿಜ್ಯ ವ್ಯಾಪಾರವು ಮುಕ್ತವಾಗಿರಲಿದೆ ಎಂದು ಹೇಳಿದರು.