- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಮಾತೃ ವಿಯೋಗ

kasturi [1]ಮೂಡಬಿದ್ರೆ : ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಯವರ ಮಾತೃಶ್ರೀ ಕಸ್ತೂರಿ 63 ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇಂದು ಬೆಳಿಗ್ಗೆ 5.45 ಕ್ಕೆ ಮುಡಬಿದ್ರೆ ಸ್ವರಾಜ್ ಮೈದಾನಿನ ಸಮೀಪವಿರುವ ಅವರ ಮನೆಯಲ್ಲಿ ನಿಧನರಾದರು.

ರಮೇಶ್ ಶಾಂತಿ ಮತ್ತು ಕಸ್ತೂರಿ ದಂಪತಿಗಳಿಗೆ 6 ಜನ ಮಕ್ಕಳು ನಾಲ್ಕು ಗಂಡು ಮತ್ತು ಎರಡು  ಹೆಣ್ಣು, ಸುದರ್ಶನ್ ಮೊದಲನೆಯವರು. ರಮೇಶ್ ಶಾಂತಿ ಸ್ವರಾಜ್ ಮೈದಾನ ಅಯ್ಯಪ್ಪ ಗುಡಿಯಲ್ಲಿ ಅರ್ಚಕರಾಗಿದ್ದರೆ

ನಾಳೆ ಆಗಸ್ಟ್ 13 ರಂದು ಅಂತ್ಯಕ್ರಿಯೆ ನಡೆಯಲಿದ್ದು, ಬೆಳಿಗ್ಗೆ 7 ರಿಂದ 9.30 ರವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿ ಕೊಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ