[1]ಮಂಗಳೂರು : ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಅಡ್ಯಾರ್ ನಿವಾಸಿ ಸುಗಂಧಿ ಅವರ ಚಿಕಿತ್ಸೆಗೆ ತನ್ನ ವಯ್ಯಕ್ತಿಕ ನೆಲೆಯಲ್ಲಿ ಲಯನ್ ಪ್ರಶಾಂತ್ ಭಟ್ ಕಡಬ ಅವರು ಹತ್ತು ಸಾವಿರ ರೂಪಾಯಿಗಳ ಚೆಕ್ ಹಸ್ತಾಂತರಿಸಿದ್ದಾರೆ.
ಮಂಗಳೂರಿನ ಲಯನ್ಸ್ ಕ್ಲಬ್ 317ಡಿ ಮಲ್ಲಿಕಟ್ಟೆ ಯಲ್ಲಿ ನಡೆದ 74ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನಿವೃತ್ತ ಸೈನಿಕ ಲಯನ್ ರಾಘವೇಂದ್ರ ಭಟ್ ಅವರು ಸುಗಂಧಿಯವರ ಪುತ್ರ ಅಜಿತ್ ಪೂಜಾರಿಗೆ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭ ಲಯನ್ಸ್ ಕ್ಲಬ್ ಉಪಾಧ್ಯಕ್ಷ ಸತೀಶ್ ರೈ, ಮಾಜಿ ಅಧ್ಯಕ್ಷ ಶೇಖರ್ ಪೂಜಾರಿ. ಕೋಶಾಧಿಕಾರಿ ಸುಧಾಕರ್ ಶೆಟ್ಟಿ, ಲಿಯೋ ಮಾಜಿ ಅಧ್ಯಕ್ಷೆ ಅನಿತಾ ವಿ.ಡಿ’ಸೋಜಾ ಉಪಸ್ಥಿತರಿದ್ದರು.