- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೃಷಿ ಯಂತ್ರಧಾರಾ ಯೋಜನೆಯ ಮ್ಯಾನೇಜರ್ ಶವ ನಾಗಜೆ ಕೆರೆಯಲ್ಲಿ ಪತ್ತೆ

Rakshith [1]ಬೆಳ್ತಂಗಡಿ : ನಾವೂರು ಗ್ರಾಮದ ನಾಗಜೆ ಎಂಬಲ್ಲಿ ಯುವಕನ ಶವ ಕೆರೆಯಲ್ಲಿ ಪತ್ತೆಯಾದ ಘಟನೆ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ನಾಗಜೆ ಎಂಬಲ್ಲಿ ಆ.28 ರಂದು ನಡೆದಿದೆ.

ನಾವೂರು ಗ್ರಾಮದ ನಾಗಜೆ ನಿವಾಸಿ ರಕ್ಷಿತ್ (25) ಮೃತಪಟ್ಟ ವ್ಯಕ್ತಿ.

ಕಳೆದ ಒಂಭತ್ತು ದಿನಗಳ ಹಿಂದೆ ಖಾಸಗಿ ಸಂಸ್ಥೆಯೊಂದರ ಕೃಷಿಯಂತ್ರಧಾರೆಯಲ್ಲಿ ಕೃಷಿ ಯಂತ್ರಧಾರಾ ಯೋಜನೆಯ ಮ್ಯಾನೇಜರ್ ಆಗಿ ಚನ್ನರಾಯಪಟ್ಟಣದಲ್ಲಿ ಉದ್ಯೋಗಕ್ಕೆ ಸೇರ್ಪಡೆಗೊಂಡಿದ್ದರು.

ಆ.22 ರಂದು ಮನೆಗೆ ಬಂದು ಆ.24 ರಂದು ಕೆಲಸಕ್ಕೆ ತೆರಳಿದ್ದರು. ಬಳಿಕ ಮೊಬೈಲ್ ಸಂಪರ್ಕಕ್ಕೆ ಸಿಗದಿದ್ದರಿಂದ ಅನುಮಾನ ವ್ಯಕ್ತವಾಗಿತ್ತು.

ಅವರ ಬೈಕ್ ಮನೆ ಸಮೀಪದ ಕಾಡಿನ ಬಳಿ ಪತ್ತೆಯಾಗಿದ್ದು ವಿಷದ ಪಟ್ಟಣವೂ ಸ್ಥಳದಲ್ಲಿ ಪತ್ತೆಯಾಗಿತ್ತು. ಈತನ ಸತತ ಹುಡುಕಾಟದ ಬಳಿಕ ಆ.28 ರಂದು ಮನೆಯ ಸಮೀಪದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ.

ಆತ್ಮಹತ್ಯೆ ಮಾಡಿರಬಹುದೋ ಅಥವಾ ವ್ಯವಸ್ಥಿತ ಕೊಲೆಯೋ ಎಂಬ ಬಗ್ಗೆ ತನಿಖೆ ಬಳಿಕ ತಿಳಿದು ಬರಬೇಕಿದೆ.