[1]ಮಂಗಳೂರು : ಮಂಗಳೂರು: ಪಂಪ್ ವೆಲ್ ಫ್ಲೈ ಓವರ್ ಸಮೀಪದ ಸರ್ವೀಸ್ ರಸ್ತೆಯಲ್ಲಿ ಉಂಟಾಗಿರುವ ಗುಂಡಿಯಲ್ಲಿ ಮಹಿಳೆಯೋರ್ವರು ಓಣಂ ಪೂಕಳಂ ಹಾಕಿ ಇಂದು ವಿನೂತನ ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ಇಲಾಖೆಯ ಅಧಿಕಾರಿಗಳು ರಸ್ತೆ ಕೆಲಸ ಮತ್ತು ಗುಂಡಿಗಳನ್ನು ದುರಸ್ತಿ ಮಾಡಿದರು.
ಸರ್ವೀಸ್ ರಸ್ತೆಗಳಲ್ಲಿ ಹೊಂಡಗಳು ನಿರ್ಮಾಣವಾಗಿದ್ದು, ವಾಹನ ಸಂಚಾರಕ್ಕೆ ತಡೆ ಉಂಟಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.ಈ ಹಿನ್ನೆಲೆಯಲ್ಲಿ ಮಂಗಳೂರಿನ ರಾಧಿಕಾ ಧೀಮಂತ್ ಸುವರ್ಣ ಎಂಬ ಮಹಿಳೆ ರಸ್ತೆ ಗುಂಡಿಯಲ್ಲಿಯೇ ಓಣಂ ಪೂಕಳಂ ರಚನೆ ಮಾಡಿ ವಿನೂತನವಾಗಿ ಪ್ರತಿಭಟನೆ ನಡೆಸಿ ಎಲ್ಲರ ಗಮನ ಸೆಳೆದಿದ್ದಾರೆ.