- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಮ್ಯುನಿಸ್ಟರ ಹಾಗೂ ನಕ್ಸಲ್ ಸಂಘಟನೆಗಳ ಕಾರ್ಯಕ್ರಮವನ್ನು ರದ್ದುಗೊಳಿಸಲು ಸಮಿತಿಯ ಮನವಿ

hjjs [1]ಮಂಗಳೂರು :  ಗೌರಿ ಲಂಕೇಶ ಹತ್ಯೆಯ ಪ್ರಕರಣದ ಸಂಬಂಧ ಎಡಪಂಥೀಯ ವಿಚಾರಧಾರೆಯ ವಿಚಾರವಾದಿಗಳು “ನಾವು ಎದ್ದು ನಿಲ್ಲದಿದ್ದರೆ ?” ಹೆಸರಿನಡಿಯಲ್ಲಿ ದಿನಾಂಕ 5 ಸೆಪ್ಟೆಂಬರ್ ನಂದು  ಸುಮಾರು 400 ಸಮವಿಚಾರಿ ಸಂಘಟನೆಗಳು ಸೇರಿ ಆಂದೋಲನವನ್ನು ಹಮ್ಮಿಕೊಂಡಿದೆ. ಇಂತಹ ಕಾರ್ಯಕ್ರಮಗಳನ್ನು ನಡೆಸಲು ಬಿಡಬಾರದು ಎಂದು ಹಿಂದೂ ಜನಜಾಗೃತಿ ಸಮಿತಿ ಸರಕಾರವನ್ನು ಕೇಳಿಕೊಂಡಿದೆ.

ಈ ಆಂದೋಲನವನ್ನು ಮೇಲ್ನೋಟಕ್ಕೆ ನೋಡಿದಾಗ ಗೌರಿ ಹತ್ಯೆಯ ಹೆಸರಿನಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುವುದಕ್ಕಿಂತ ಕೇಂದ್ರ ಸರಕಾರವನ್ನು ತೀವ್ರವಾಗಿ ಟೀಕಿಸುವ ಉದ್ದೇಶವೇ ಹೆಚ್ಚು ಇದೆ ಎಂಬ ಸಂಶಯ ಮೂಡುತ್ತದೆ. ಈಗಾಗಲೇ ದಿಲ್ಲಿ ಮತ್ತು ಬೆಂಗಳೂರಿನಲ್ಲಿ ನಡೆದ ದಂಗೆಯು ಸಹ ಪೂರ್ವನಿಯೋಜಿತವಾಗಿದ್ದು, ಪೋಲೀಸರ ಮೇಲೆ ಮಾರಣಾಂತಿಕ ಹಲ್ಲೆ ಮತ್ತು ಸಾಮಾಜಿಕ ಆಸ್ತಿ ಪಾಸ್ತಿಗಳಿಗೆ ಮಾಡಿದ ಹಾನಿಯನ್ನು ನೋಡಿದರೆ ಸಮಾಜದಲ್ಲಿ ಅಶಾಂತಿಯನ್ನು ಮೂಡಿಸುವ ದೃಷ್ಟಿಯಲ್ಲಿಯೇ ಈ ಹುನ್ನಾರ ನಡೆದಿದೆ ಎಂಬುವುದು ಸ್ಪಷ್ಟವಾಗುತ್ತದೆ. ಹಾಗಾಗಿ, ಸಪ್ಟಂಬರ 5, 2020 ರಂದು ಅಂದರೆ ನಾಳೆ ಆಯೋಜಿಸಲಾಗಿರುವ ಕಾರ್ಯಕ್ರಮವು ಕೇಂದ್ರ ಸರಕಾರವನ್ನು ಟೀಕಿಸುವ ಮತ್ತು ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಹಾಗೂ ಜನರನ್ನು ವಿಭಜಿಸಿ ಸಮಾಜದಲ್ಲಿ ಅಶಾಂತಿ ಮೂಡಿಸುವ ಉದ್ದೇಶದಿಂದಲೇ ಮಾಡಲಾಗುತ್ತಿದೆ ಎಂಬುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಇಲ್ಲಿ ಗೌರಿ ಲಂಕೇಶರು ಸಹ ನಕ್ಸಲರ ಬೆಂಬಲಿಗರಾಗಿದ್ದು , ಅವರು ಸಾಕೇತ ರಾಜನ್ ಎಂಬ ಅಪಾಯಕಾರಿ ನಕ್ಸಲ್ ಮುಖಂಡನ ಬಗ್ಗೆ ಲೇಖನ ಸಹ ಬರೆದಿದ್ದರು. ಮಾತ್ರವಲ್ಲದೇ, ಅವರ ಕಾರ್ಯಕರ್ತರು ಸಹ ನಕ್ಸಲ್ ಚಟುವಟಿಕೆಗಳಿಗಾಗಿ ಬಂಧಿಸಲ್ಪಟ್ಟಿದ್ದಾರೆ. ಗಿರೀಶ ಕಾರ್ನಾಡರು ಸಹ 2018 ರಲ್ಲಿ ಇಂತಹ ಆಂದೋಲನಗಳಲ್ಲಿ ಬಹಿರಂಗವಾಗಿ ಭಾಗವಹಿಸಿ ‘ನಾನು ಸಹ ನಗರ ನಕ್ಸಲ್’ ಎಂದು ನಕ್ಸಲ್‌ವಾದವನ್ನು ಸಮರ್ಥಿಸಿ ನೀಡಿದ ಹೇಳಿಕೆಯನ್ನು ಸಹ ಇಲ್ಲಿ ಮುಖ್ಯವಾಗಿ ಉಲ್ಲೇಖಿಸಬೇಕೆನಿಸುತ್ತದೆ ಎಂದು ಹಿಂದೂ ಜನಜಾಗೃತಿ ಸಮಿತಿ ಹೇಳಿದೆ.

ಇಂತಹ ಅಭಿಯಾನಗಳು ಕಾನೂನು ಮತ್ತು ಸುವ್ಯವಸ್ಥೆಗೆ ನೇರ ಹಾಗೂ ನಿಜವಾದ ಬೆದರಿಕೆಯಾಗಿವೆ ಎಂದರೆ ತಪ್ಪಾಗಲಾರದು. ಹಾಗಾಗಿ ಇಂತಹ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದು. ಇಲ್ಲದಿದ್ದರೆ ಅವರ ಮೇಲೆ ಅಗತ್ಯ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕೆಂದು ರಾಷ್ಟ್ರಾಭಿಮಾನಿಗಳು, ಸಮಾಜಹಿತವನ್ನು ಬಯಸುವ ಧರ್ಮಪ್ರೇಮಿಗಳು ರಾಜ್ಯದ ಬೆಂಗಳೂರು, ಮಂಗಳೂರು, ಉಡುಪಿ, ವಿಜಯಪುರ, ಬೆಳಗಾವಿ, ಹುಬ್ಬಳ್ಳಿ, ಹಾಸನ, ಮೈಸೂರು, ಶಿವಮೊಗ್ಗ ಹೀಗೆ ವಿವಿಧ ಜಿಲ್ಲೆಗಳಲ್ಲಿ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಮನವಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು ಮಾಡಿದ್ದಾರೆ.

ಈ ಕಾರ್ಯಕ್ರಮದ ಮೇಲೆ ಜರುಗಿಸಬೇಕಾದ ಅವಶ್ಯಕ ಕ್ರಮಗಳು:
1. ಇಂತಹ ಕಾರ್ಯಕ್ರಮಗಳನ್ನು / ಆಂದೋಲನಗಳನ್ನು ಮಾಡಲು ಬಿಡಬಾರದು. ಇಂತಹ ಕಾರ್ಯಕ್ರಮಗಳನ್ನು ನಿಷೇಧ ಮಾಡುವಂತದ್ದು ಕೊರೊನಾ ಮಹಾಮಾರಿಯ ದೃಷ್ಟಿಯಿಂದಲೂ ಅತ್ಯಂತ ಅವಶ್ಯಕವಾಗಿದೆ.
2. ಇದು ತಮಗೆ ಸಾಧ್ಯವಿಲ್ಲದಿದ್ದಲ್ಲಿ ಇಂತಹ ಸಂಘಟನೆಗಳಿಗೆ, ಸಂಘಟನೆಗಳ ಆಯೋಜಕರಿಗೆ ಅವಶ್ಯವಿರುವ ನೋಟಿಸು, ಧೋರಣೆಗಳನ್ನು ಜಾರಿಗೊಳಿಸಬೇಕು.
3. ಆದರೂ ಈ ಆಂದೋಲನಗಳನ್ನು ನಡೆಸುವುದಾದರೆ ದಯಮಾಡಿ ಈ ಆಂದೋಲನಗಳ ವಿಡಿಯೋ ಶೂಟಿಂಗ ಮಾಡಿಡಬೇಕು . ಇದರಿಂದ ಮುಂದೆ ಅಪರಾಧಿಗಳ ದೃಷ್ಟಿಯಿಂದ ಅವಶ್ಯಕತೆ ಬಿದ್ದಾಗ ಅದನ್ನು ಉಪಯೋಗಿಸಬಹುದು.
4. ಈ ಪ್ರಕರಣದಲ್ಲಿ ಕಾನೂನುಬಾಹಿರ ಕೃತ್ಯಗಳಾಗಿರುವುದು ಕಂಡುಬಂದಲ್ಲಿ ಅದರಲ್ಲಿ ಭಾಗವಹಿಸಿದವರೆಲ್ಲರ ಮೇಲೆ ಅವಶ್ಯವಿರುವ ಕಾನೂನು ಕ್ರಮಗಳನ್ನು ಜರುಗಿಸಬೇಕು.