- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನಗರದ ಕಲ್ಲಾಪು ಬಳಿ ಬಸ್ -ಜೀಪ್ ಡಿಕ್ಕಿ ಆರುಮಂದಿಗೆ ಗಾಯ

Jeep bus hit at Kallaup [1]ಮಂಗಳೂರು : ಗುರುವಾರ ಬೆಳಗ್ಗೆ ತೊಕ್ಕೊಟ್ಟು ಸಮೀಪ ಕಲ್ಲಾಪು ಬಳಿ ಬಸ್ ಮತ್ತು ಕಾರ್ ನಡುವೆ ಮುಖಾಮುಕಿ ಸಂಭವಿಸಿದ ಡಿಕ್ಕಿಯಲ್ಲಿ ಜೀಪ್ ನಲ್ಲಿದ್ದ 6 ಮಂದಿ ಗಾಯಗೊಂಡಿದ್ದು ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ವಿದೇಶಕ್ಕೆ ತೆರಳಲಿದ್ದ ಮನೆಮಂದಿಯೊಬ್ಬರನ್ನು ಬಜ್ಪೆ ವಿಮಾನ ನಿಲ್ದಾಣಕ್ಕೆ ಬಿಟ್ಟು ಹಿಂದಿರುಗುತ್ತಿದ್ದ ವೇಳೆ ಕುಂಪಲದಿಂದ ಸ್ಟೇಟ್ ಬ್ಯಾಂಕ್ ಗೆ ತೆರಳುತ್ತಿದ್ದ ಸಿಟಿ ಬಸ್ ಡಿಕ್ಕಿ ಹೊಡೆದಿದೆ.

ಕಾಸರಗೋಡು ವಿದ್ಯಾನಗರದ ನಾಸಿರ್, ಅಬ್ದುಲ್ ಕುಂಞ, ಅನ್ಫಾಲ, ಅಶ್ರಫ್, ನೌಫಾರ ಹಾಗೂ ಜೀಪ್ ಚಾಲಕ ಅಬೂಬಕರ್ ಗಾಯಾಳುಗಳಾಗಿದ್ದು ಈ ಪೈಕಿ ಚಾಲಕ ಅಬೂಬಕರ್ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಲಿಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಜೀಪ್ ಚಾಲಕ ಅಬೂಬಕರ್ ಹಾಗೂ ಬಸ್ ಡ್ರೈವರ್ ಮಹಮ್ಮದ್ ರಫೀಕ್ ರ ವಿರುದ್ಧ ಉಲ್ಲಾಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.