- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಉಡುಪಿ ಶ್ರೀಕೃಷ್ಣಮಠದಲ್ಲಿ ಗುರುವಾರ ಶ್ರೀಕೃಷ್ಣ ಜಯಂತಿ ಉತ್ಸವ, ಶುಕ್ರವಾರ ವಿಟ್ಲಪಿಂಡಿ

Krishna Matt [1]ಉಡುಪಿ : ಶ್ರೀಕೃಷ್ಣಮಠದಲ್ಲಿ ಗುರುವಾರ ಶ್ರೀಕೃಷ್ಣ ಜಯಂತಿ ಉತ್ಸವ ನಡೆಯಲಿದ್ದು ಶ್ರೀಕೃಷ್ಣಮಠವನ್ನು ಬಗೆಬಗೆಯ ಹೂವು ಗಳಿಂದ ಅಲಂಕರಿಸಲಾಗಿದೆ.

ವಿಟ್ಲಪಿಂಡಿ ಉತ್ಸವಕ್ಕೆ ಈಗಾಗಲೇ 12 ಗುರ್ಜಿ, ಎರಡು ಮಂಟಪಗಳನ್ನು ನಿರ್ಮಿಸಿದ್ದು, ಬುಧವಾರ ಇದಕ್ಕೆ ಬಟ್ಟೆ ಕಟ್ಟುವ ಕೆಲಸ ನಡೆದಿದೆ. ಇಷ್ಟು ವರ್ಷ ಮುದ್ದುಕೃಷ್ಣ ವೇಷ ಸ್ಪರ್ಧೆ ಮತ್ತು ಇತರ ವೇಷಗಳ ಸ್ಪರ್ಧೆ ನಡೆಯುತ್ತಿದ್ದರೆ ಈ ಬಾರಿ ಇವೆರಡಕ್ಕೂ ಅವಕಾಶ ಇಲ್ಲ.

ಶ್ರೀಕೃಷ್ಣಮಠದ ವಾದ್ಯ ಕಲಾವಿದ ದಾಮೋದರ ಶೇರಿಗಾರ್‌ ಅವರ ಸಂಯೋಜನೆಯಲ್ಲಿ ಶಿವಮೊಗ್ಗದ ಕೃಷ್ಣಮೂರ್ತಿ ಬಳಗ, ಬಂಟ್ವಾಳದ ಪ್ರಶಾಂತ ಸಜಿಪ, ಅಲೆವೂರಿನ ಉದಯ ಶೇರಿಗಾರ್‌ ಮತ್ತು ಪರ್ಕಳದ ಶ್ರೀನಿವಾಸ ಶೇರಿಗಾರ್‌ ಅವರ ನಾಗಸ್ವರ ವಾದನವನ್ನು ಏರ್ಪಡಿಸಲಾಗಿದೆ.

ಕೋವಿಡ್‌-19 ಸೋಂಕಿನ ಕಾರಣ ಸಾರ್ವಜನಿಕರಿಗೆ ಶ್ರೀಕೃಷ್ಣಮಠಕ್ಕೆ ಪ್ರವೇಶ ನೀಡು ತ್ತಿಲ್ಲ. ಸಾರ್ವಜನಿಕರಿಗೆ ಪ್ರವೇಶವಿಲ್ಲವೆಂದು ಜಿಲ್ಲಾಡಳಿತ ಸೂಚಿಸಿದೆ. ಕೃಷ್ಣ ದರ್ಶನ ಮಾಡಲು ಅವಕಾಶ ಇಲ್ಲದಿದ್ದರೂ ಕೃಷ್ಣನ ಪ್ರಸಾದವನ್ನು ಭಕ್ತರಿಗೆ ವಿತರಿಸಲು ಒಂದು ಲಕ್ಷ ಚಕ್ಕುಲಿ, ಒಂದು ಲಕ್ಷ ಉಂಡೆಯನ್ನು ತಯಾರಿಸಲಾಗುತ್ತಿದೆ.

ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ಸ್ವಾಮಿಗಳು, ರಾತ್ರಿ 12:16 ಗಂಟೆಗೆ ಆರ್ಘ್ಯ ಪ್ರಾಧಾನದ ಧಾರ್ಮಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಕಾರ್ ಸ್ಟ್ರೀಟ್ ಸುತ್ತ ಗೊಲ್ಲರು ಮಡಕೆ ಒಡೆಯುವಲ್ಲಿ 12 ಮರದ ಗುರ್ಜಿಗಳು ಮತ್ತು 2 ಮಂಟಪವನ್ನು ನಿರ್ಮಿಸಲಾಗಿದೆ, ಇದರ ಕೆಳಗೆ ಶ್ರೀ ಕೃಷ್ಣನ ಚಿನ್ನದ ರಥವನ್ನು ಚಲಿಸಲಾಗುತ್ತದೆ. ಈ ಮರದ ಗೋಪುರಾಗಳಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನೂ ಇಡಲಾಗುತ್ತದೆ. ಸಾಂಪ್ರದಾಯಿಕ ವೇಷಭೂಷಣವನ್ನು ಧರಿಸಿ ಈ ಮಡಿಕೆಗಳನ್ನು ಒಬ್ಬರಮೇಲೆ ಒಬ್ಬರು ಹತ್ತಿ ಕೋಲಿನಿಂದ ಒಡೆಯಬೇಕು. ಈ ಮೊಸರು ಕುಡಿಕೆ ಸಂಪ್ರದಾಯ ಕಳೆದ 80 ವರ್ಷಗಳಿಂದ ನಡದು ಬರುತ್ತಿದೆ.

Krishna Matt [2]