[1]ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಕೊರೊನಾ ಸೋಂಕಿತರ ಸಂಖ್ಯೆ 456 ಕ್ಕೆ ಏರಿಕೆಯಾಗಿದೆ. 11 ಮಂದಿ ಸಾವನ್ನಪ್ಪಿದ್ದಾರೆ.
ಶುಕ್ರವಾರ ಕೊರೊನಾದಿಂದ ಸಾವನ್ನಪ್ಪಿದ 11 ಮಂದಿಯಲ್ಲಿ 6 ಮಂದಿ ಮಂಗಳೂರು ತಾಲೂಕಿನವರಾದರೆ, ತಲಾ ಒಬ್ಬರು ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕು ಮತ್ತು ಇಬ್ಬರು ಹೊರಜಿಲ್ಲೆಯವರಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 472 ಕ್ಕೆ ಏರಿಕೆಯಾಗಿದೆ.
456 ಮಂದಿ ಕೊರೊನಾ ಸೋಂಕಿತರಲ್ಲಿ 242 ಮಂದಿ ಮಂಗಳೂರು ತಾಲೂಕು, 86 ಬಂಟ್ವಾಳ ತಾಲೂಕು, 27 ಪುತ್ತೂರು ತಾಲೂಕು, 26 ಸುಳ್ಯ ತಾಲೂಕು, 40 ಬೆಳ್ತಂಗಡಿ ತಾಲೂಕು ಮತ್ತು 35 ಮಂದಿ ಹೊರಜಿಲ್ಲೆಯವರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 19322 ಕ್ಕೆ ಏರಿಕೆಯಾಗಿದೆ.ಜಿಲ್ಲೆಯಲ್ಲಿ ಇಂದು 340 ಮಂದಿ ಗುಣಮುಖರಾಗಿದ್ದು, ಈವರೆಗೆ 14344 ಮಂದಿ ಗುಣಮುಖರಾದಂತಾಗಿದೆ. 4506 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಡುಪಿ : ವೈದ್ಯರು ಕೊರೋನಾ ವರದಿ ನೀಡುವುದಿಲ್ಲ ಎಂದು ನಿರ್ಧಾರ ಕೈಗೊಂಡ ನಾಲ್ಕು ದಿನಗಳ ಬಳಿಕ ಉಡುಪಿಯಲ್ಲಿ ಇಂದು ಕೊರೋನಾ ವರದಿ ಪ್ರಕಟಗೊಂಡಿದೆ. ಆರೋಗ್ಯ ಇಲಾಖೆ, ಜಿಲ್ಲಾಡಳಿತ ಕೊರೋನಾ ವರದಿ ಪ್ರಕಟಿಸಿದ್ದು, ನಾಲ್ಕು ದಿನಗಳಲ್ಲಿ 845 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಒಟ್ಟು ಸೋಂಕಿತರ ಪೈಕಿ 430 ಮಂದಿಯಲ್ಲಿ ಪ್ರಾಥಮಿಕ ಸಂಪರ್ಕದಿಂದ ಸೋಂಕು ಬಂದಿದೆ. 215 ಐಎಲ್ ಐ ಕೇಸ್ ಗಳಾಗಿವೆ. 23 ಸಾರಿ ಪ್ರಕರಣಗಳಾಗಿವೆ. 165 ಮಂದಿಯ ಸೋಂಕಿನ ಮೂಲ ಪತ್ತೆಹಚ್ಚುವ ಕಾರ್ಯ ಮುಂದುವರೆಸಲಾಗಿದೆ. ಹೊರರಾಜ್ಯಗಳಿಂದ ಮರಳಿದ 9 ಮಂದಿ ಹಾಗೂ ವಿದೇಶದಿಂದ ಮರಳಿದ ಮೂವರಲ್ಲಿ ಸೋಂಕು ದೃಢಪಟ್ಟಿದೆ.
ಸೋಂಕಿತರ ಪೈಕಿ ಉಡುಪಿ ತಾಲೂಕಿನಲ್ಲಿ 578 ಮಂದಿಯಲ್ಲಿ, ಕುಂದಾಪುರ ತಾಲೂಕಿನ 127 ಮಂದಿಯಲ್ಲಿ, ಕಾರ್ಕಳ ತಾಲೂಕಿನ 114 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 26 ಮಂದಿ ಹೊರ ಜಿಲ್ಲೆಯವರಾಗಿದ್ದಾರೆ. 379 ಮಂದಿಯಲ್ಲಿ ಲಕ್ಷಣ ಸಹಿತ ಸೋಂಕು ದೃಢಪಟ್ಟಿದೆ.