- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಜೆಸಿಂತಾ ಆತ್ಮಕ್ಕೆ ಶಾಂತಿ ಕೋರಿ ನಗರದಲ್ಲಿ ಇಂದು ಮೊಂಬತ್ತಿ ಮೆರವಣಿಗೆ

Jacintha Saldanha [1]ಮಂಗಳೂರು :ಲಂಡನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಉಡುಪಿ ಮೂಲದ ನರ್ಸ್ ಜೆಸಿಂತಾ ಸಲ್ದಾನ ಅವರ ಆತ್ಮಕ್ಕೆ ಶಾಂತಿಕೋರಿ ಇಂದು ಮಂಗಳೂರಿನಲ್ಲಿ ಮೊಂಬತ್ತಿ ಮೆರವಣಿಗೆ ಹಾಗೂ ಸಂತಾಪ ಸಭೆ ಆಯೋಜಿಸಲಾಗಿದೆ. ನಗರದ ವೆಲೆನ್ಸಿಯಾ ವೃತ್ತದಿಂದ ಬೆಂದೂರುವೆಲ್‌ವರೆಗೆ ಸಂಜೆ 6.30ಕ್ಕೆ ಮೊಂಬತ್ತಿ ಮೆರವಣಿಗೆ ನಡೆಯಲಿದ್ದು ಬಳಿಕ ಅಲ್ಲಿ ಸಂತಾಪ ಸಭೆ ಜರಗಲಿದೆ ಎಂದು ಐವನ್‌ ಡಿಸೋಜ ಅವರು ತಿಳಿಸಿದ್ದಾರೆ.

ಲಂಡನ್‌ನಲ್ಲಿ ನರ್ಸ್‌ ಜೆಸಿಂತಾ ಸಲ್ದಾನ ಅವರ ನಿಗೂಢ ಸಾವಿನ ಬಗ್ಗೆ ಸಮಗ್ರ ತನಿಖೆಯಾಗುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಕೇಂದ್ರ ಇಂಧನ ಮತ್ತು ನೈಸರ್ಗಿಕ ಅನಿಲ ಸಚಿವ ಡಾ| ಎಂ. ವೀರಪ್ಪ ಮೊಲಿ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್‌ ಖುರ್ಷಿದ್‌ ಖಾನ್‌ ಅವರನ್ನು ಕೋರಿದ್ದಾರೆ. ಜೇಸಿಂತಾ ಸಾವಿನ ಬಗ್ಗೆ ಬ್ರಿಟನ್‌ ಸರಕಾರ ತೋರುತ್ತಿರುವ ವರ್ತನೆಯ ಬಗ್ಗೆ ಅವರ ಹೆತ್ತವರು, ಸಂಬಂಧಿಕರು ಸೇರಿದಂತೆ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯ ಜನತೆಯಿಂದ ಈಗಾಗಲೇ ಪ್ರತಿಭಟನೆ ವ್ಯಕ್ತವಾಗಿದ್ದು ಸರಿಯಾದ ತನಿಖೆ ಕೈಗೊಳ್ಳುವಂತೆ ತಿಳಿಸಲಾಗಿದೆ.