[1]ಪುತ್ತೂರು: ‘ಝೀರೋ ಟ್ರಾಫಿಕ್’ ಮೂಲಕ ಪುತ್ತೂರಿನ ಆಸ್ಪತ್ರೆಯಿಂದ ಶ್ವಾಸಕೋಶದ ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿನ ಆಂಬುಲೆನ್ಸ್ ಮೂಲಕ 4. 20 ನಿಮಿಷದಲ್ಲಿ ಬೆಂಗಳೂರು ವೈದೇಹಿ ಆಸ್ಪತ್ರೆಗೆ ರೋಗಿಯನ್ನು ತಲುಪಿಸಲಾಗಿದೆ.
ಬೆಳಗ್ಗೆ 11 ಗಂಟೆಗೆ ಪುತ್ತೂರು ಮಹಾವೀರ ಆಸ್ಪತ್ರೆಯಿಂದ ‘ಝೀರೋ ಟ್ರಾಫಿಕ್’ ಆಂಬುಲೆನ್ಸ್ ಪ್ರಯಾಣ ಆರಂಭಿಸಿತು. ವಿವಿಧ ಠಾಣಾ ಪೊಲೀಸರು, ಸಂಘ ಸಂಸ್ಥೆಗಳ ಕಾರ್ಯಕರ್ತರು ಸುಗಮ ಸಂಚಾರಕ್ಕೆ ಸಹಕರಿಸಿದರು ವಿಟ್ಲದ “ಡಿ ಗ್ರೂಪ್”ಆಂಬ್ಯುಲೆನ್ಸ್ ಬೆಂಗಾವಲಾಗಿ ಮುಂಭಾಗದಿಂದ ತೆರಳಿ ಸಹಕರಿಸಿತು.
ಆಂಬುಲೆನ್ಸ್ ಬೆಂಗಳೂರು ವೈದೇಹಿ ಆಸ್ಪತ್ರೆ ತಲುಪಿದ ತಕ್ಷಣವೇ ಸುಹಾನಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆಯ ಪ್ರಕ್ರಿಯೆ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. 4 ಗಂಟೆ 20 ನಿಮಿಷದಲ್ಲಿ ಬೆಂಗಳೂರು ತಲುಪುವ ಮೂಲಕ ದಾಖಲೆ ನಿರ್ಮಿಸಿದೆ.