[1]ಮಂಗಳೂರು : ಡಿಸೆಂಬರ್ 23ರಿಂದ ಜನವರಿ 7 ರವರೆಗೆ ಕರ್ನಾಟಕ ರಾಜ್ಯಾದ್ಯಂತ ನೈಟ್ ಕರ್ಫ್ಯೂವನ್ನು ರಾತ್ರಿ10 ರಿಂದ ಬೆಳಿಗ್ಗೆ 6ಗಂಟೆಯವರೆ ಏರಲಾಗಿದ್ದು, ಕ್ರಿಸ್ಮಸ್ ಮತ್ತು ಅನೇಕ ಮದುವೆ ಸಮಾರಂಭಗಳು ಸಂಜೆ ಹೊತ್ತಿನಲ್ಲಿ ನಡೆಯಲಿರುವುದರಿಂದ ಅದರಲ್ಲೂ, ಕ್ರಿಸ್ಮಸ್ ಡಿಸೆಂಬರ್ 24 ರಂದು ಸಂಜೆ ವೇಳೆ ಎಲ್ಲಾ ಚರ್ಚುಗಳಲ್ಲಿ ಕ್ರಿಸ್ಮಸ್ ಪೂಜೆ ಸಂಭ್ರಮ ನಡೆಯಲಿರುವುದರಿಂದ, ದಿನಾಂಕ 24ರಂದು ಸಂಪೂರ್ಣವಾಗಿ ಕರ್ಫ್ಯೂನಿಂದ ವಿನಾಯಿತಿ ನೀಡಬೇಕೆಂದು ಮತ್ತು ಇತರ ದಿನಗಳಲ್ಲಿ ಹಾಕಿರುವಂತೆ ರಾತ್ರಿ 11ರಿಂದ 5ಗಂಟೆಯವರೆಗೆ ಹಾಕಿರುವ ಕರ್ಫ್ಯೂನಲ್ಲಿ ಸಡಿಲಿಕೆ ನೀಡುವಂತೆ ಮುಖ್ಯಮಂತ್ರಿಯವರಲ್ಲಿ ವಿನಂತಿಸಿದರು.
ಈ ಬಗ್ಗೆ ಇಂದು ದೂರವಾಣಿ ಮೂಲಕ ಮುಖ್ಯಮಂತ್ರಿಗೆ ಸಂರ್ಪಕಿಸಿದರು ಮತ್ತು ಆರೋಗ್ಯ ಸಚಿವ ಡಾ,ಸುಧಾಕರ್ ಇವರನ್ನು ಸಂಪರ್ಕಿಸಿ, ಕರ್ಫ್ಯೂನಲ್ಲಿ ಸಡಿಲಿಕೆ ನೀಡಬೇಕೆಂದು ಕೋರಿದ್ದಾರೆ ಹಾಗೂ ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.