- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪಾಂಡೇಶ್ವರ ಪೊಲೀಸ್ ಠಾಣೆ ವಠಾರ ದುರಸ್ತಿ ಮತ್ತು ಠಾಣಾ ಒಳರಸ್ತೆ ಕಾಂಕ್ರೀಟೀಕರಣಕ್ಕೆ ಚಾಲನೆ

Pandeshwara Station [1]ಮಂಗಳೂರು : ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆ ವಠಾರ ದುರಸ್ತಿ, ಹಾಗೂ ಠಾಣಾ ಒಳರಸ್ತೆ ಕಾಂಕ್ರೀಟೀಕರಣಕ್ಕೆ ಇಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ದಿವಾಕರ್ ಪಾಂಡೇಶ್ವರ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್, ಎಸಿಪಿ ಜಗದೀಶ್, ನಟರಾಜ್, ಪಾಂಡೇಶ್ವರ ಇನ್ ಸ್ಪೆಕ್ಟರ್ ಎ. ಸಿ ಲೋಕೇಶ್, ಸಬ್ ಇನ್ ಸ್ಪೆಕ್ಟರ್ ಸುರೇಶ್, ಶೀತಲ್, ಹಿರಿಯ ಸಿಬ್ಬಂದಿ ಸುನಿಲ್ SB, ಸ್ಥಳೀಯ ಪ್ರಮುಖರಾದ ನಿತಿನ್ ಕಾಮತ್, ಅನಿಲ್ ಕುಮಾರ್, ಅಬ್ದುಲ್ ನಾಸಿರ್, ಅಮರ್ ಪಾಂಡೇಶ್ವರ ಹಾಗೂ ಪೊಲೀಸ್ ಸಿಬ್ಬಂದಿ ವರ್ಗ, ಇನ್ನಿತರರು ಉಪಸ್ಥಿತರಿದ್ದರು.