- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಗುಡ್ಡದ ಮೇಲೆ ಮಜಾ ಮಾಡುತ್ತಿದ್ದ ಅನ್ಯಕೋಮಿನ ಜೋಡಿ, ಥಳಿಸಿದ ಹಿಂದೂ ಸಂಘಟನೆ ಕಾರ್ಯಕರ್ತರು

mudipu gudda [1]ಮಂಗಳೂರು :  ಮುಡಿಪು ಗುಡ್ಡೆಯಲ್ಲಿ ಮಜಾ ಮಾಡುತ್ತಿದ್ದ ಅನ್ಯಕೋಮಿನ ಜೋಡಿಯನ್ನು ಹಿಂದೂ ಸಂಘಟನೆ ಕಾರ್ಯಕರ್ತರು ಹಿಡಿದು ಪೊಲೀಸರರಿಗೆ ಒಪ್ಪಿಸಿದ ಘಟನೆ ನಡೆದಿದೆ.

ಮೂಡಬಿದಿರೆಯ ಜುನೈದ್ ಎಂಬಾತ ಕೈರಂಗಳ ವಿದ್ಯಾನಗರದ ಹಿಂದೂ ಯುವತಿಯೊಂದಿಗೆ ಮುಡಿಪು ಬೆಟ್ಟದಲ್ಲಿ ಒಟ್ಟಿಗೆ ಇದ್ದಾಗ ಜಾಗರಣ ವೇದಿಕೆಯ ಕಾರ್ಯಕರ್ತರಿಗೆ ಸಿಕ್ಕಿಬಿದ್ದಿದ್ದು, ಇಬ್ಬರಿಗೂ ಥಳಿಸಿ ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ಯುವತಿಗೆ ಇನ್ಸ್ಟಾಗ್ರಾಂ ಮೂಲಕ ಈ ಯುವಕನ ಪರಿಚಯವಾಗಿತ್ತು ಎನ್ನಲಾಗಿದೆ. ಕಳೆದ ಒಂದು ವಾರದಲ್ಲಿ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹ ಮೂರು ಘಟನೆಗಳು ನಡೆದಿದ್ದು ಬೋಳಿಯಾರ್ ಬಳಿ ಯುವಕನಿಂದ ಅತ್ಯಾಚಾರ ಯತ್ನ, ಬಾಳೆಪುಣಿ ಪುಣ್ಯಕೋಟಿ ನಗರದ ಬಳಿ ಯುವತಿಯ ಅತ್ಯಾಚಾರ ಯತ್ನ ಇದೀಗ ಮುಡಿಪುವಿನಲ್ಲಿ ನಡೆದ ಈ ಘಟನೆಯಿಂದ ಸ್ಥಳೀಯವಾಗಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

ಕೊಣಾಜೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ