- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಇಂದು ಸಂಜೆ  ಆನ್‌ಲೈನ್‌ದಲ್ಲಿ ‘ಸನಾತನ ಪ್ರಭಾತ’ದ 22 ನೇ ವರ್ಧಂತ್ಯುತ್ಸವ

sanathana Prabhata [1]ಮಂಗಳೂರು  : ಕಳೆದ 22 ವರ್ಷಗಳಿಂದ ಹಿಂದೂಗಳಿಗೆ ಧರ್ಮಶಿಕ್ಷಣ, ರಾಷ್ಟ್ರ ಹಾಗೂ ಧರ್ಮದ ರಕ್ಷಣೆಗಾಗಿ ಪ್ರಬೋಧನೆ ಮಾಡುತ್ತಿರುವ ಕನ್ನಡ ವಾರ ಪತ್ರಿಕೆ ಸನಾತನ ಪ್ರಭಾತದ 22 ನೇ ವರ್ಧಂತ್ಯುತ್ಸವವು ಶನಿವಾರ ಅಂದರೆ ಫೆಬ್ರವರಿ 13 ಕ್ಕೆ ಆನ್‌ಲೈನ್‌ನಲ್ಲಿ ಇರಲಿದೆ. ತಾವೆಲ್ಲರೂ ತಪ್ಪದೇ ಭಾಗವಹಿಸಬೇಕೆಂದು ಕರೆ ನೀಡುತ್ತಿದ್ದೇವೆ.

ಕಾರ್ಯಕ್ರಮದ ವಿವರ :
ದಿನಾಂಕ :13 ಫೆಬ್ರವರಿ, ಶನಿವಾರ ಸಂಜೆ 6.00 ರಿಂದ.

ಮುಖ್ಯ ವಕ್ತಾರರು :-
೧. ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿ, ಕರಿಜೆ ಮಠ, ದ.ಕ. ಜಿಲ್ಲೆ.
೨. ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ.
೩. ಶ್ರೀ. ಪ್ರಮೋದ್ ಮುತಾಲಿಕ್, ಸಂಸ್ಥಾಪಕರು, ಶ್ರೀರಾಮ ಸೇನೆ.
೪. ಶ್ರೀ. ಚಕ್ರವರ್ತಿ ಸೂಲಿಬೆಲೆ, ಸಂಸ್ಥಾಪಕರು, ಯುವ ಬ್ರಿಗೇಡ್.
೫. ಶ್ರೀ. ಗುರುಪ್ರಸಾದ ಗೌಡ, ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ.

ಈ ಕಾರ್ಯಕ್ರಮವು Youtube.com/sskarnataka ಮತ್ತು FB.com/Sanatan.Prabhat.Kannada ಮೂಲಕ ಪ್ರಸಾರವಾಗಲಿದೆ. ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ವಿನಂತಿ.