- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪಕ್ಕದ ಮನೆಯ ಮಹಿಳೆಯೊಂದಿಗೆ ಲವ್ ಅಪೈರ್. ವ್ಯಕ್ತಿಯ ಕೊಲೆ ಮಾಡಿದ ಆರು ಜನರ ಬಂಧನ

brammavar Murder [1]ಬ್ರಹ್ಮಾವರ : ಪಕ್ಕದ ಮನೆಯ ಮಹಿಳೆಯೊಂದಿಗೆ ಲವ್ ಅಪೈರ್ ಇಟ್ಟುಕೊಂಡಿದ್ದ ಯುವಕನನ್ನು ಪಶ್ನಿಸಿದಕ್ಕೆ ಗೆಳೆಯರೊಂದಿಗೆ ಸೇರಿ ವ್ಯಕ್ತಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಭಂದಿಸಿದಂತೆ  ಅಪರಾಧ ಮಾಡಿದ 24 ಗಂಟೆಯೊಳಗೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಗೌತಮ್ (27), ಮನೋಜ್ ಭಂಡಾರಿ (30), ಧನುಷ್ (27), ಚೇತನ್ ಕುಮಾರ್ (24), ತಿಲಕ್ ರಾಜ್ (36) ಮತ್ತು ಸಿದ್ಧಾರ್ಥ್ ಎಂದು ಗುರುತಿಸಲಾಗಿದೆ. ಸಿದ್ಧಾರ್ಥ್ ಹೊರತುಪಡಿಸಿ ಉಳಿದವರೆಲ್ಲರೂ ಮಲ್ಪೆ ನಿವಾಸಿಗಳಾಗಿದ್ದರೆಂದು ತಿಳಿದು ಬಂದಿದೆ.

ಗುಡ್ಡೆಯಂಗಡಿ ಬಳಿಯ ಹೊಸೂರಿನಲ್ಲಿ ನವೀನ್‌‌ ನಾಯ್ಕ್  ಎಂಬ ವ್ಯಕ್ತಿಯನ್ನು ಭಾನುವಾರ ರಾತ್ರಿ ಕೊಲೆ ಮಾಡಲಾಗಿತ್ತು.  ಅಪರಾಧಕ್ಕೆ ಬಳಸಿದ ರಿಟ್ಜ್ ಕಾರನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.

ತನಿಖೆ ಮತ್ತು ಬಂಧನ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಸರ್ಕಲ್ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ, ಬ್ರಹ್ಮಾವರ: ಪಿಎಸ್‌ಐ ಗುರುನಾಥ್ ಹಡಿಮಣಿ ಮತ್ತು ಬ್ರಹ್ಮಾವರ, ಮಲ್ಪೆ ಮತ್ತು ಉಡುಪಿ ಪೊಲೀಸ್ ಠಾಣೆಗಳ ಸಿಬ್ಬಂದಿ ಭಾಗವಹಿಸಿದ್ದರು.