- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸುರತ್ಕಲ್ ಬೀಚ್ ನಲ್ಲಿ ಸಮುದ್ರ ಪಾಲಾದ ಶಿವಮೊಗ್ಗ ಮೂಲದ ಬಾಲಕ

surathkal Beach [1]ಮಂಗಳೂರು :  ಶಿವಮೊಗ್ಗ ಮೂಲದ ಬಾಲಕನೋರ್ವ ಸುರತ್ಕಲ್  ಗುಡ್ಡೆಕೊಪ್ಲ ಬೀಚ್ನಲ್ಲಿ ಸಮುದ್ರ ಪಾಲಾದ ಘಟನೆ ಸೋಮವಾರ ನಡೆದಿದೆ. ಬಾಲಕನ ತಂದೆಯನ್ನು ಸ್ಥಳೀಯ ಈಜುಗಾರರು ರಕ್ಷಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಮುಬಾರಕ್ (15) ಮಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ಕಾರ್ಯಕ್ರಮದ ನಿಮಿತ್ತ ಆಗಮಿಸಿದ್ದ. ಈ ವೇಳೆ ಸಮುದ್ರ ವಿಹಾರಕ್ಕೆಂದು ಹೆತ್ತವರು ಹಾಗೂ ಸಂಬಂಧಿಕರೊಂದಿಗೆ ತೆರಳಿದ್ದ. ಸಮುದ್ರ ತೀರದಲ್ಲಿ ನೀರಿಗಿಳಿದು ಆಟವಾಡುತ್ತಿದ್ದಾಗ ಬೃಹತ್ ಗಾತ್ರದ ತೆರೆ ಅಪ್ಪಳಿಸಿ ಬಾಲಕ ಮುಬಾರಕ್ ನೀರು ಪಾಲಾಗಿದ್ದಾನೆ.

ಈ ಸಂದರ್ಭ ಬಾಲಕನ ತಂದೆಯೂ ಅಲೆಯ ಸೆಳೆತಕ್ಕೆ ಸಿಲುಕಿದ್ದು, ತಕ್ಷಣ ಸ್ಥಳೀಯ ಈಜುಗಾರರು ರಕ್ಷಿಸಿದ್ದಾರೆ. ಬಾಲಕ ಮುಬಾರಕ್ಗಾಗಿ ಹುಡುಕಾಟ ಮುಂದುವರೆದಿದೆ.