- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಟ್ಟಿಗೆ ರಾಶಿಯಡಿಯಲ್ಲಿ ಬಚ್ಚಿಡಲಾಗಿದ್ದ 430 ಬಾಟ್ಲಿ ಮದ್ಯ ವಶ

liquors [1]ಕಾಸರಗೋಡು : ಕೊರೋನಾ ಸಾಂಕ್ರಾಮಿಕದ ನಡುವೆ ಕಾಸರಗೋಡು ಅಬಕಾರಿ ದಳದ ಸಿಬಂದಿಗಳು ಕಟ್ಟಿಗೆ ರಾಶಿಯಡಿಯಲ್ಲಿ ಬಚ್ಚಿಡಲಾಗಿದ್ದ 430 ಬಾಟ್ಲಿ ಮದ್ಯವನ್ನು ವಶ ಪಡಿಸಿಕೊಂಡಿದ್ದಾರೆ.

ಮಧೂರು ಕಲ್ಲಕಟ್ಟದ ಎ.ಕೆ. ಸಚಿನ್ ಎಂಬಾತನ ಮನೆಯ ಸಮೀಪದ ಕಟ್ಟಿಗೆ ರಾಶಿ ಯೊಂದರಲ್ಲಿ ಮದ್ಯದ ಬಾಟ್ಲಿ ಗಳನ್ನು ಬಚ್ಚಿಡಲಾಗಿತ್ತು. ಅಬಕಾರಿ ದಳಕ್ಕೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಯಿತು.

ಮತ್ತೊಂದು ಪ್ರಕರಣದಲ್ಲಿ ಕರಂದಕ್ಕಾಡ್ ಸಮೀಪ ಜನವಾಸ ವಿಲ್ಲದ ಮನೆಯ ಹಿಂಬದಿ ಅಕ್ರಮವಾಗಿ ಮಾರಾಟಕ್ಕಿಡಲಾಗಿದ್ದ ಸುಮಾರು 21 ಬಾಟ್ಲಿ ಮದ್ಯವನ್ನು ಅಬಕಾರಿ ದಳದ ಸಿಬಂದಿಗಳು ವಶಪಡಿಸಿಕೊಂಡಿದ್ದಾರೆ . ಕರ್ನಾಟಕದಿಂದ ಅಕ್ರಮವಾಗಿ ಮದ್ಯ ತರಲಾಗಿತ್ತು ಎನ್ನಲಾಗಿದೆ. ಎರಡೂ ಪ್ರಕರಣಗಳಲ್ಲಿ ಯಾರನ್ನೂ ಬಂಧಿಸಿಲ್ಲ.