- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದಕ್ಷಿಣ ಕನ್ನಡ ಜಿಲ್ಲಾಅಪರ ಜಿಲ್ಲಾಧಿಕಾರಿ ರೂಪ ಎಂ.ಜೆ. ವರ್ಗಾವಣೆ

Roopa MJ [1]ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ  ಅಪರ ಜಿಲ್ಲಾಧಿಕಾರಿಯಾಗಿದ್ದ ರೂಪ ಎಂ.ಜೆ.  ವರ್ಗಾವಣೆ ಗೊಂಡಿದ್ದು ನೂತನ ಅಪರ ಜಿಲ್ಲಾಧಿಕಾರಿಯಾಗಿ ಡಾ. ಪ್ರಜ್ಞಾ ಅಮ್ಮೆಂಬಳ(ಕೆಎ.ಎಸ್) ಅವರನ್ನು ನೇಮಕ ಮಾಡಿ ಸರಕಾರ  ಆದೇಶ  ಹೊರಡಿಸಿದೆ.

ಡಾ. ಪ್ರಜ್ಞಾ ಅವರು ಕೆಎ ಎಸ್ ಹಿರಿಯ ಶ್ರೇಣಿಯ ಅಧಿಕಾರಿಯಾಗಿದ್ದು, ಬೆಂಗಳೂರಿನ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮದ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದರು.

ರೂಪ ಎಂ.ಜೆ.  ಅವರಿಂದ  ತೆರವಾದ ಸ್ಥಾನಕ್ಕೆ ಇದೀಗ ಡಾ. ಪ್ರಜ್ಞಾ ಅವರನ್ನು ನೇಮಕಗೊಳಿಸಲಾಗಿದೆ.