- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಂಜೆವಾಣಿ ಮಂಗಳೂರಿನ ಬ್ರಾಂಚ್ ಮ್ಯಾನೇಜರ್ ಕೋವಿಡ್ ಗೆ ಬಲಿ

vijaya Rao [1]ಮಂಗಳೂರು : ‌ ಸಂಜೆವಾಣಿ ಮಂಗಳೂರಿನ ಬ್ರಾಂಚ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ವಿಜಯ್ ರಾವ್ ಗುರುವಾರ ರಾತ್ರಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ವಿಜಯ್ ರಾವ್ (56) ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆ ಅವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಉಸಿರಾಟದ ತೀವ್ರ ಸಮಸ್ಯೆಯಿಂದ ನಿನ್ನೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಮೂಲತಃ ಕಾರ್ಕಳ ಬೈಲೂರು ನಿವಾಸಿ ಯಾಗಿರುವರ ಇವರು ಮಂಗಳೂರಿನ ಎಕ್ಕೂರು ಸಮೀಪ ನೆಲೆಸಿದ್ದರು. ಮೊದಲಿಗೆ ನೇತ್ರಾವತಿ ವಾರ್ತಾ ಪತ್ರಿಕೆಯಲ್ಲಿ ಮಾರ್ಕೆಟಿಂಗ್ ಹುದ್ದೆಯಲ್ಲಿದ್ದ ಇವರು ಹಲವು ವರ್ಷಗಳ ಕಾಲ ಸಂಜೆವಾಣಿ  ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಮೃತರು ಮಗ ಅಶ್ವಿನ್ ರಾವ್, ಮಗಳು ಐಶ್ವರ್ಯ, ಪತ್ನಿ ಆಶಾ ರಾವ್ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಇವರ ಮಗನ ವಿವಾಹ ಸಮಾರಂಭ ನಡೆದಿತ್ತು.