[1]ಕಲಬುರಗಿ: ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಕರೊನಾಗೆ ಪುರಸಭೆ ಸದಸ್ಯ ಮತ್ತು ಇವರ ತಾಯಿ, ಸಹೋದರ ಸೇರಿ ಒಂದೇ ಕುಟುಂಬದ ಮೂವರು ಬಲಿಯಾಗಿದ್ದು, ಮತ್ತೊಬ್ಬ ಸಹೋದರನ ಸ್ಥಿತಿ ಗಂಭೀರವಾಗಿರುವ ಘಟನೆ ಈ ಘಟನೆ ಸಂಭವಿಸಿದೆ.
ಆರ್ಸಿ ತಾಂಡದ ನಿವಾಸಿ ಚಾಂದಿಬಾಯಿ ನಾಯಕ್ (74), ಇವರ ಪುತ್ರ ವಾಡಿ ಪುರಸಭೆ ಸದಸ್ಯ ಪ್ರಕಾಶ್ ನಾಯಕ್(46) ಮತ್ತು ಕಿರಿಯ ಪುತ್ರ ಭಜನ್ ನಾಯಕ್(32) ಮೃತರು.
ಕಳೆದ ವಾರ ಪ್ರಕಾಶ್ ನಾಯಕ್ ಕರೊನಾಗೆ ಬಲಿಯಾಗಿದ್ದರು. ಇವರ ಕಿರಿಯ ಸಹೋದರ ಭಜನ್ ಮತ್ತು ತಾಯಿ ಚಾಂದಿಬಾಯಿ ಅವರಿಗೂ ಕರೊನಾ ಸೋಂಕು ತಗುಲಿದ್ದರಿಂದ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ತಾಯಿ-ಮಗ ಇಬ್ಬರೂ ಗುರುವಾರ ಕೊನೆಯುಸಿರೆಳೆದಿದ್ದಾರೆ.
ಚಾಂದಿಬಾಯಿ ಅವರ ಮತ್ತೊಬ್ಬ ಮಹೇಶ್ ನಾಯಕ್ಗೂ ಕರೊನಾ ಸೋಂಕು ತಗುಲಿದ್ದು, ಪರಿಸ್ಥಿತಿ ಗಂಭೀರಾವಾಗಿದೆ. ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ.