- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಂದಾಯ ಸಚಿವರಿಂದ ರಕ್ಷಾಬಂಧನ‌ ಆಚರಣೆ

Rakshabandhan [1]ಬೆಂಗಳೂರು : ಭಾತೃತ್ವದ ಸಂಕೇತವಾಗಿರುವ‌ ರಕ್ಷಾಬಂಧನದ ನಿಮಿತ್ತ ಕಂದಾಯ ಸಚಿವ ಆರ್‌ ಅಶೋಕ‌ ಅವರು ಹೊಸಕೆರೆಹಳ್ಳಿಯಲ್ಲಿ‌ ಮಹಿಳಾ ಕಾರ್ಯಕರ್ತರಿಂದ ರಾಖಿ ಕಟ್ಟಿಸಿಕೊಂಡು ಶುಭ ಕೋರಿದರು.

ಈ ವೇಳೆ ಮಾತನಾಡಿದ ಸಚಿವರು,”ಹಿಂದೂ ಸಂಪ್ರದಾಯದಲ್ಲಿ ರಕ್ಷಾ ಬಂಧನಕ್ಕೆ ಪೌರಾಣಿಕ ಹಿನ್ನೆಲೆಯಿದೆ. ಸಹೋದರಿಯ ರಕ್ಷಣೆಯ ಸೂಚಕವಾಗಿ ರಾಖಿ ಕಟ್ಟಿಸಿಕೊಳ್ಳುವ ಸಹೋದರ ಆ‌ ಮೂಲಕ ಆಕೆಗೆ ನಿರಂತರ ರಕ್ಷಣೆ ನೀಡುವ ಅಭಯ ಈ ಆಚರಣೆಯಲ್ಲಿ ಅಡಗಿದೆ”, ಎಂದು ಹೇಳಿದರು.