[1]ಮಂಗಳೂರು : ದಕ್ಷ ಕ್ರಿಯೇಷನ್ ರವರ ಪ್ರಥಮ ಸಿನೆಮಾ ‘ದ್ರುವ ನಕ್ಷತ್ರ’ ದ ಪ್ರಥಮ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಗುರುವಪ್ಪ ಹೋಟೆಲ್ಸ್ ಪ್ರೈವೇಟ್ ಲಿಮಿಟೆಡ್ ಹೈದ್ರಾಬಾದ್ ನ ಉಡುಪಿ ಉಪಹಾರ್ ಹೋಟೆಲ್ಸ್ ಆವರಣದಲ್ಲಿ ಶುಕ್ರವಾರ ನಡೆಯಿತು.
ಪೋಸ್ಟರ್ ಬಿಡುಗಡೆಯನ್ನು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ ಬಹುಭಾಷಾ ನಟ ಸುಮನ್ ತಲ್ವಾರ್ ನೆರವೇರಿಸಿದರು ಈ ಸಂದರ್ಭ ಉದ್ಯಮಿ ಚೇತನ್ ಆನಂದ್ ಬೋಳಾರ್ ಹಾಗೂ ಚಿತ್ರದ ಸಹ ನಿರ್ಮಾಪಕ ಶರಣ್ ಕುಮಾರ್ ಎಸ್. ಕದ್ರಿ ಹಾಗೂ ಗಣ್ಯರು ಉಪಸ್ಥಿತರಿದ್ದರು.
ಶರತ್ ಚಂದ್ರ ಕದ್ರಿ ಯವರ ಚಿತ್ರಕಥೆ -ನಿರ್ದೇಶನ ದಲ್ಲಿ ಸಿನೆಮಾ ಮೂಡಿ ಬರಲಿದ್ದು. ರಾಘವೇಂದ್ರ ರಾಜಕುಮಾರ್, ಸುಧಾರಾಣಿ ಹಾಗೂ ಕಾಮಿಡಿ ಕಿಲಾಡಿಯ ಖ್ಯಾತ ಕಲಾವಿದರ ತಂಡ ಚಿತ್ರದಲ್ಲಿ ಅಭಿನಯಿಸಲಿದೆ. ದ್ರುವ ನಕ್ಷತ್ರ ಶರತ್ ಚಂದ್ರ ಕದ್ರಿ ಅವರ ನಿರ್ದೇಶನದ ಎರಡನೇ ಹಾಗೂ ಮೊದಲ ಕನ್ನಡ ಸಿನಿಮಾ. ಅವರ ಮೊದಲ ನಿರ್ದೇಶನದ ‘ಬೊಳ್ಳಿಲು’ ಮಂಗಳಾದೇವಿ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ತಳುನಾಡಿನಾದ್ಯಂತ ಯಶಸ್ವೀ ಪ್ರದರ್ಶನ ಕಂಡಿತ್ತು.