[1]ಮಂಗಳೂರು: ಸಾಫ್ಟ್ವೇರ್ ಕಂಪನಿ ದಿಯಾ ಸಿಸ್ಟಮ್ಸ್ ಮಂಗಳೂರು ಪ್ರೈ. ಲಿಮಿಟೆಡ್ ಸ್ಥಾಪಕ ಡಾ.ರವಿಚಂದ್ರನ್ ಅವರು ನಿಧನರಾಗಿದ್ದಾರೆ.
ಮಂಗಳೂರು ಮೂಲದ ಡಾ.ರವಿಚಂದ್ರನ್ ಅವರು ಎರಡು ವರ್ಷ ಹಿಂದೆ ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಮೆರಿಕದ ಕೆಂಟಕಿಯಲ್ಲಿರುವ ತನ್ನ ಮಗಳ ಮನೆಯಲ್ಲಿ ಮೃತಪಟ್ಟರು.
ಇವರ ಸಾಧನೆಗೆ ಭಾರತೀಯ ಉದ್ಯೋಗ ರತ್ನ ಅವಾರ್ಡ್, ಅಲೋಷಿಯನ್ ಅಲ್ಯುಮಿನಿ ಅವಾರ್ಡ್, ಎಂಎಂಎ-ಕೆವಿಕೆ ಅತ್ಯುತ್ತಮ ಮ್ಯಾನೇಜರ್ ಅವಾರ್ಡ್, 2016ರ ಸ್ಪಂದನ ಎಂಟರ್ಪ್ರಿನರ್ ಆಫ್ ದಿ ಇಯರ್ ಪ್ರಶಸ್ತಿಗಳು ಬಂದಿದ್ದವು.
ಇವರಿಗೆ ಪತ್ನಿ ಇಂದಿರಾ, ಮಗಳು ವಿದ್ಯಾ, ಮಗ ಹರಿ ಯವರನ್ನು ಅಗಲಿದ್ದಾರೆ.