- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹಿಂದೂ ಯುವತಿ ಮತಾಂತರದ ಮದುವೆ, ಯುವತಿಯ ಮನೆಗೆ ಭೇಟಿ ನೀಡಿದ ಗುರುಪುರ ವಜ್ರದೇಹಿ ಶ್ರೀಗಳು

Mohan-Bekary [1]ಮಂಗಳೂರು : ಹಿಂದೂ ಯುವತಿಯೊಬ್ಬಳು ಮುಸ್ಲಿಂ ಹುಡುಗನನ್ನು ಮೂರು ವರ್ಷಗಳಿಂದ ಪ್ರ್ರೀತಿಸಿ ಬಳಿಕ ಮನೆಯವರನ್ನು ಒಪ್ಪಿಸಿ ನವೆಂಬರ್ 29 ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ.

ಸ್ಟೇಟ್ ಬ್ಯಾಂಕ್ ಸಿಟಿ ಬಸ್ ಸ್ಟ್ಯಾಂಡ್ ನ ಎದುರುಗಡೆ ಇರುವ ಮೋಹನ್ ಬೇಕರಿ ಮಾಲೀಕರ ಮಗಳು ಕೇರಳದ ಕಣ್ಣೂರಿನ ಮುಸ್ಲಿಂ ಯುವಕನ ಜೊತೆ ಮದುವೆಯಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳಲು ನಿರ್ಧರಿಸಿದ್ದನ್ನು ಹಿಂದೂ ಸಂಘಟನೆಗಳು ವಿರೋಧಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕವಾಗಿ ಖಂಡಿಸಿದ್ದವು.

ಈ ವಿಚಾರವಾಗಿ ವಿಶ್ವ ಹಿಂದೂ ಪರಿಷತ್ ನ ಶರಣ್ ಪಂಪ್ ವೆಲ್  ಯುವತಿಯ ಮನೆಗೆ ತೆರಳಿ ಅವಳ ಮನವೊಲಿಸುವ ಪ್ರಯತ್ನವನ್ನು ಮಾಡಿದರು. ಗುರುಪುರ ವಜ್ರದೇಹಿ ಶ್ರೀಗಳು ಜೊತೆಗೆ ಇದ್ದು ಯುವತಿಯ ಕುಟುಂಬದ ಜೊತೆಗೆ ಚರ್ಚಿಸಿದರು.

Mohan-Bekary [2]

Mohan-Bekary [3]

Mohan-Bekary [4]

Mohan-Bekary [5]